Dhathri Baipadittaya profile
Dhathri Baipadittaya
21 4 1
Posts Followers Following
Dhathri Baipadittaya
Quote by Dhathri Baipadittaya - ಮಲ್ಲಿಗೆ ದಿಂಡು

ಕನ್ನಡ ಚೆಲುವಲಿ ಕಾಕಡವಲ್ಲ
ಅದು ಮಲ್ಲಿಗೆ ದಿಂಡು
ಕನ್ನಡ ಮೌಲ್ಕದಿ ಕಬ್ಬಿಣವಲ್ಲ
ಅದು ವಜ್ರದ ಬೆಂಡು
ಕನ್ನಡ ಘೋಷಕೆ ಕದನಾವೇಶಕೆ
ಮದಗಜಗಳ ದಂಡು
ಕನ್ನಡ ಒಲವಿನ ಪಿಸು ಪಿಸುಮಾತಲಿ
ಮೊಲ ಗಿಳಿಗಳ ಹಿಂಡು
ಕನ್ನಡವೆಂಬುದು ಬರಿ ನುಡಿಯಲ್ಲ
ಕರಿ ಮಣ್ಣಿನ ಸೊಗಡು
ಉಕ್ಕಲಿ ಕನ್ನಡ ತುಂಬಲಿ ದಿಶೆಗಳು
ಎಂಟು ಮತ್ತೆರಡು
ಮಾತೃ-ಭಾಷೆಯ ಘಮಲಿಲ್ಲದ ಮನ 
ಏನಿದ್ದರೂ ಬರುಡು
ತಾಯ್ನೆಲಕ್ಕೋಸ್ಕರ ಸವೆಯುವ ಮೈಮನ
ಶ್ರೀಗಂಧದ ಕೊರಡು

🌄"ಅರುಣ್ಮಯಿ" - Made using Quotes Creator App, Post Maker App
0 likes 0 comments
Dhathri Baipadittaya
Quote by Dhathri Baipadittaya - 'ಅಗಲಿಸಿ ಕಣ್ಣ
ನೋಡಲೆ ಅಣ್ಣ
ಕರುನಾಡ ಮಡಿಲಿದು 
ನೂರೆಂಟು ಬಣ್ಣ'

🌄"ಅರುಣ್ಮಯಿ" - Made using Quotes Creator App, Post Maker App
0 likes 0 comments
Dhathri Baipadittaya
Quote by Dhathri Baipadittaya - ಮಾತ್ರವೇ ಬೇಡ

ಹೊಗಳುತ ಹಾಡುವ ಸಿರಿ ಕರುನಾಡ
ಸವಿಯಲು ಹಂಚುವ ಕನ್ನಡ ಪೇಡ
ನವೆಂಬರ್ ಒಂದಕ್ಕೇ ಮಾತ್ರವೇ ಬೇಡ
ರಾಜ್ಯೋತ್ಸವವೇ ಪ್ರತಿದಿನ ಕೂಡ

🌄"ಅರುಣ್ಮಯಿ" - Made using Quotes Creator App, Post Maker App
0 likes 0 comments
Dhathri Baipadittaya
Quote by Dhathri Baipadittaya - ಸಹಮಿಲನ

ಉಪ್ಪುಹುಳಿ ಖಾರಗಳ ಸಹಮಿಲನ
ಸಿಹಿ ಕಹಿ ಒಗರುಗಳ ರಸಾಯನ
ಈ ಬದುಕೆಂದರೆ ಭವದ ಸಮ್ಮೋಹನ
ಆರು- ನೂರು ರಸಗಳ ಸಮ್ಮೇಳನ

🌄"ಅರುಣ್ಮಯಿ" - Made using Quotes Creator App, Post Maker App
0 likes 0 comments
Dhathri Baipadittaya
Quote by Dhathri Baipadittaya - 
ಸಲಿಲ ಸುಕುಮಾರೆ

ಸಿರಿ ಹಾಲ ನೊರೆಯಂತೆ ಕರಿ ಹಾವ ಪೊರೆಯಂತೆ
ಬಿರು ಕಲ್ಲ ಕೊರೆಯುತ್ತಾ ಬರುತಿಹಲು ನೀರೆ

‌ಸಿಕ್ಕಿದನು ಸೆಲೆಯುತಲಿ ಒಕ್ಕಲನು ಬೆಳೆಸುತಲಿ
ಸೊಕ್ಕುತಲಿ ಧಿಮ್ಮಿಕ್ಕಿ ಉಕ್ಕುಕ್ಕಿ ಧಾರೆ

ರಚ್ಚೆಯನು ತಾ ಹಿಡಿದು ಉಚ್ಚಗಿರಿಯಿಂದಿಳಿದು
ಪಚ್ಚೆ ಹಾಸಿನ ಬಣ್ಣ ‌ಹೆಚ್ಚಿಸುವ ಧೀರೆ

ಬಳಲಿರುವ ಜೀವರಿಹೆ ಬಲ ನೀಡಿ ನೀ ಸಲಹೆ
ನಲಿವಿನಾಮೃತವನ್ನು ಒಲವಿನಲಿ ತಾರೇ

ರಮೆಯಾಗಿ ರಮಿಸುತಲಿ ಉಮೆಯಾಗಿ ಉಣಿಸುತಲಿ
ಸುಮ ಸುಮದ ಒಳಗರಳಿ ಘಮವಾಗಿ ತೋರೇ

ಮೇಘ ರಾಣಿಯ ತನಯೇ ಸಾಗರನ ಪ್ರಿಯತಮೆಯೇ
ಪೂರ ಪೂರವಾಗಿ ಬಾ.. ಸಲಿಲ ಸುಕುಮಾರೆ

🌄"ಅರುಣ್ಮಯಿ" - Made using Quotes Creator App, Post Maker App
0 likes 0 comments
Dhathri Baipadittaya
Quote by Dhathri Baipadittaya - ಬಂದ ನೋಡಿ

ಬಂದ ನೋಡಿ ಬಂದ ನೋಡಿ ಮುದ್ದು ಗಣಪತಿ
ಅಂದದೂರು ಕೈಲಾಸದ ಕಿರಿಯ ಅಧಿಪತಿ
ಕಂದನಿವನು ಚಂದದವನು ಅಪ್ಪ ಅಮ್ಮಗೆ
ತಿಂಡಿ ಪೋತ ಮುದ್ದು ತಮ್ಮ ಅಣ್ಣ‌ಸ್ಕಂದಗೆ

ಮಾತೆ ಮೈಯ ಮಣ್ಣಿನಿಂದ ಹುಟ್ಟಿ ಬಂದವ
ತಂದೆಯೆದುರೇ ದಂಡವನ್ನು ಹಿಡಿದು ನಿಂದವ 
ತಲೆಯ ತೆಗೆಸಿಕೊಂಡು ಮತ್ತೆ ಜನುಮ ಪಡೆದವ
ಆನೆ ಮುಖದಿ ಹೊತ್ತು ತಂದ ಶುಭದ ಅನುಭವ ||ಬಂದ ನೋಡು||

ಚುಕ್ಕಿ ತಾರೆ ಮಿನುಗುತಿಹುದು ಇವನ ಕಣ್ಣಲ್ಲಿ
ಜಗದ ಚೆಲುವು ಗೆಲುವು ಎಲ್ಲಾ ಇವನ ನಗುವಲಿ
ಶಬ್ದಕೋಟಿ ಬಂಢಾರವೆ ಇವನ ಸ್ವರದಲಿ
ಸಾಧುಜನರ ಪುಣ್ಯವೆಲ್ಲ ಇವನ ಸೊಬಗಲಿ ||ಬಂದ ನೋಡಿ||

ಎಲ್ಲಾ ರಾಗ ತಾಳಗಳಿಗೆ ಇವನೆ ನರ್ತಕ
ಸೃಷ್ಟಿ ಸ್ಥಿತಿ ಲಯಗಳೊಡನೆ ಇವನೆ ವರ್ತಕ
ಸಕಲ ಮೋದ ವಿನೋದಗಳಲಿ ಇವನೆ ನಾಯಕ 
ಬೇಡಿ ಬರುವ ಭಕ್ತ ಜನಕೆ ಆನಂದದಾಯಕ

ಬಂದ ನೋಡಿ ಬಂದ ನೋಡಿ ಪ್ರಥಮ ವಂದಿತ
ಅಂಧಕಾರ ತೊಡೆಯಲೆಂದು ಬಂದ ಹರಸುತ

🌄"ಅರುಣ್ಮಯಿ" - Made using Quotes Creator App, Post Maker App
1 likes 0 comments
Dhathri Baipadittaya
Quote by Dhathri Baipadittaya - 🙏 ನಮೋಸ್ತುತೆ 🙏

ಸುನಿಲ ಸಾಗರ 
ಸುವಾವೃತೆ
ಧವಲ ಆಸನ 
ವಿರಾಜಿತೆ
ಸಕಲ ಧಾರಿಣಿ ಅಮೃತ ಹಾಸಿನಿ
ಹೇ.. ಮಾ.. ಭಾರತಿ ನಮೋಸ್ತುತೆ


🌄"ಅರುಣ್ಮಯಿ" - Made using Quotes Creator App, Post Maker App
0 likes 0 comments
Dhathri Baipadittaya
Quote by Dhathri Baipadittaya - ಶುಭ ರಾತ್ರಿ

ಹಗುರವಾಗಿರಲಿ ಮನಸು
ಮಧುರವಾಗಿರಲಿ ಕನಸು
ವಿಧುವನ್ನೂ ಬಂಧಿಸಿದೆ ಹೃದಯ
ಗಗನಕ್ಕು ಬಂದಂತಿದೆ ಹರೆಯ

🌄 "ಅರುಣ್ಮಯಿ" - Made using Quotes Creator App, Post Maker App
0 likes 0 comments
Dhathri Baipadittaya
Quote by Dhathri Baipadittaya - ಏರಿಳಿತ

ಜೀವನದಿ ಏರಿಳಿತಗಳು ಸಹಜ
ಇದನರಿತು ನಡೆಯುವವ ಮನುಜ
ಸವಾಲಿನ ಶರಧಿಯಲಿ ಅಲುಕದೆ ಅಲೆಗಳಿಗೆ 
ನಡೆಸಬೇಕು ಬದುಕೆಂಬ ಜಹಜ

🌄  ಧಾತ್ರಿ"ಅರುಣ್ಮಯಿ" - Made using Quotes Creator App, Post Maker App
0 likes 0 comments
Dhathri Baipadittaya
Quote by Dhathri Baipadittaya - 
ನೃತ್ಯಗಾರ್ತಿ - ಮೋಡಿಗಾರ್ತಿ

ವೃಷ್ಠಿ ಎಂಬ ನೃತ್ಯಾಂಗನೆ ಮೆರೆಯುತಿಹಳು ಕುಣಿಯುತಾ
ಮುಂಗಾರಿನ ರಂಗದಲ್ಲಿ ಲಯವಿಲ್ಲದೆ ನಲಿಯುತಾ

ರವಿ ಶಶಿಯರ ಮರುಳು ಮಾಡಿತನ್ನ ಹಿಂದೆ ಅಡಗಿಸಿ 
ಬೆಟ್ಟ ಗುಡ್ಡ ಶಿಖರಗಳನೆ ಮೋಹದಿಂದ ಅಲುಗಿಸಿ

ಹಾಡುತಿಹಳು ಕಾಡುತಿಹಳು ನುಲಿಯುತಿಹಲು ಹೊಳೆಯುತಾ
ಸಕಲ ಜೀವ ದೇವಗಣದ ಕಣ್ಮನಗಳ ಸೆಳೆಯುತಾ

ನಾಟ್ಯಗಾರ್ತಿ ಮೋಡಿಗಾರ್ತಿ ಮರೆತಂತಿದೆ ಧನಿವನು
ಲಜ್ಜೆ ತುಂಬಿ ಹೆಜ್ಜೆಯಲ್ಲೇ ಸೃಷ್ಟಿಸಿ ತಾ ಸೊಗಸನು

-:✍ಧಾತ್ರಿ"ಅರುಣ್ಮಯಿ" - Made using Quotes Creator App, Post Maker App
0 likes 0 comments

Explore more quotes

Dhathri Baipadittaya
Quote by Dhathri Baipadittaya - ಬೆಳ್ಬೆಳಕು

ಬಾನೆಂಬ ಕೋಣೆಯ ತಿಜೋರಿಯನು ತೆರೆದಾಗ
ಹೊಳೆಯುತ್ತಾ ಬಂತೊಂದು ಚಿನ್ನದುಂಡೆ
ಮೋಡಗಳ ಮರೆಯಿಂದ ಮುನ್ನುಗ್ಗಿ ಬರುತಿರುವ 
ಸ್ವರ್ಣದೂರಿನ ಅರಸ ರವಿಯ ಕಂಡೆ

🌄 ಅರುಣ್ಮಯಿ - Made using Quotes Creator App, Post Maker App
0 likes 0 comments
Dhathri Baipadittaya
Quote by Dhathri Baipadittaya - ಶುಭ ರಾತ್ರಿ

ಕಪ್ಪು ಗಡಿಗೆಯಲ್ಲಿಟ್ಟ ನೊರೆಯ ಹಾಲನ್ನು
ಬೆಕ್ಕೊಂದು ತಿಣುಕಿ ಕಂಡಂತೆ ತಾನು
ಮೋಡ ತುಂಬಿದ ಬಾನಲ್ಲಿ ಹುಣ್ಣಿಮೆಯ ಚಂದ್ರಮನ
ಕಿಟಕಿಯಲಿ ಇಣುಕುತ್ತಾ ನೋಡಿದೆ ನಾನು

🌄 ಅರುಣ್ಮಯಿ - Made using Quotes Creator App, Post Maker App
1 likes 0 comments
Dhathri Baipadittaya
Quote by Dhathri Baipadittaya - ಅಕ್ಕ-ಪಕ್ಕ

ನಮ್ಮ ಎಲ್ಲಾ ಎದುರಾಳಿಗಳು ನಮ್ಮ ವೈರಿಗಳಲ್ಲ
ಏಕೆಂದರೆ ನಮ್ಮ ಬಹುತೇಕ ವೈರಿಗಳು ನಮ್ಮ ಎದುರು ಇರುವುದಿಲ್ಲ‌.

🌄 ಅರುಮ್ಮಯಿ - Made using Quotes Creator App, Post Maker App
0 likes 0 comments
Dhathri Baipadittaya
Quote by Dhathri Baipadittaya - ಎದುರು-ಬದುರು

ಎದುರಾಳಿಗಳೆಲ್ಲ ಶತ್ರುಗಳಲ್ಲ . ನಾವು ಅವರನ್ನು ಧ್ವೇಷಿಸುವ ಅಗತ್ಯವೂ ಇರುವುದಿಲ್ಲ.  
ನಮ್ಮ ಅತಿ ದೊಡ್ಡ ಎದುರಾಳಿಯೇ ನಮ್ಮ ಅತಿ ದೊಡ್ಡ ಅಭಿಮಾನಿಯಾಗಿರುತ್ತಾರೆ.. ನಮ್ಮ ಕೆಲಸ ಸಂಪೂರ್ಣವಾಗಿದ್ದರೆ

🌄ಅರುಣ್ಮಯಿ - Made using Quotes Creator App, Post Maker App
0 likes 0 comments
Dhathri Baipadittaya
Quote by Dhathri Baipadittaya - ಆಪತ್ಧರ್ಮ

ಸಮಾಜದಲ್ಲಿ ಅಸಭ್ಯತೆ ಹೆಚ್ಚಾಗಲು ಮರ್ಯಾದಸ್ತರೆನಿಸಿಕೊಂಡವರ  ಅತಿ ಸಭ್ಯತೆಯೇ ಕಾರಣ.
ಕೊಚ್ಚೆ ಮೇಲೆ ಕಲ್ಲು ಹಾಕಬಾರದು, ದುಷ್ಟರಿಂದ, ಅಲ್ಪರಿಂದ ದೂರ ಇರಬೇಕು.. ನಿಜ ಆದರೆ ಕೊಚ್ಚೆಯ ಹೊಂಡ ದೊಡ್ಡದಾಗುತ್ತಾ ನಮ್ಮ ಅಂಗಳದವರೆಗೂ ಬಂದರೆ ಅಂಗಳವನ್ನೇ ಬಿಟ್ಟು ಬಿಡಬೇಕೇ.? ಇಲ್ಲ ಹೊಂಡವನ್ನು ಮುಚ್ಚಬೇಕೇ..? ಹೊಂಡವನ್ನು ಮುಚ್ಚಬೇಕು ಎಂದರೆ ಕೊಚ್ಚೆಯ ಸಹವಾಸ ಮಾಡಲೇಬೇಕಲ್ಲವೇ..?   ಅಂತೆಯೇ ಅನಿವಾರ್ಯವಿರುವಾಗ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಕೆಟ್ಟವರ ಎದುರಿಗೆ ನಾವೂ ಕೆಟ್ಟತನಕ್ಕೆ ಕೊಂಚವಾದರೂ ಇಳಿಯಬೇಕಾಗುತ್ತದೆ. ಇದು ಆಪತ್ಧರ್ಮ.

🌄 ಅರುಮ್ಮಯಿ - Made using Quotes Creator App, Post Maker App
1 likes 0 comments
Dhathri Baipadittaya
Quote by Dhathri Baipadittaya - ಮಾತೃತ್ವ

ಅಮ್ಮಾ ಎನ್ನುವ ಸಣ್ಣ ಪದವದು ಲೋಕದ 
ಎಲ್ಲಕ್ಕೂ ಪರ್ಯಾಯ 
ಕಣ್ಣು ಬಿಟ್ಟೊಡನೆಯೇ ಕಂಡ ರೂಪವದು
 ಮರೆಯುವುದೆಂತು ಈ ಕಾಯ
ರಕ್ತವ ಅವಳದೆ ಸತ್ವವು ಅವಳದೆ
ಅವಳದೆ ದೇಹದ ಕಣಕಣವು
ಸೃಷ್ಟಿಯು ಅವಳದೆ ದೃಷ್ಟಿಯು ಅವಳದೆ
ಅವಳದೆ ಜೀವ ಜೀವನವು 
ಪಂಚಪ್ರಾಣಗಳ ಪಂಚತತ್ವಗಳೂ ಅವಳದು 
ಶೌರ್ಯ ಶೂರತ್ವ
ನೋಡು ನಯನಕೆ ಗಗನವೇ ದೊಡ್ಡದು ಗಗನಕೂ ಮಿಗಿಲದು ಮಾತೃತ್ವ
 

🌄 ಅರುಣ್ಮಯಿ - Made using Quotes Creator App, Post Maker App
2 likes 0 comments
Dhathri Baipadittaya
Quote by Dhathri Baipadittaya - ಖರೀದಿ ಬೇಡ ಕೊಟ್ಟು ನೋಡಿ

ಹೊರಟಿರುವಿರಾ ಸ್ವರ್ಣ ಖರೀದಿಗೆ
ಬಂದೇ ಬಿಟ್ಟಿತಲ್ಲಾ ಅಕ್ಷಯತದಿಗೆ
ಮುಷ್ಟಿಯಷ್ಟು ಹಣ ಕೊಟ್ಟು ಬೊಟ್ಟಿನಷ್ಟು ಬಂಗಾರ
ಕೊಂಡು ತರಲೇಬೇಕೇಕೆ ಮನೆಗೆ
ಚಿನ್ನ ಖರೀದಿಯ ಬದಲು ಅನ್ನ, ವಿಧ್ಯೆಯ ರಕ್ಷೆ ನೀಡಿ ಕಾಯುವುದು ಅಕ್ಷಯವಾಗಿ ಕೊನೆಗೆ

🌄 ಅರುಣ್ಮಯಿ - Made using Quotes Creator App, Post Maker App
1 likes 0 comments
Dhathri Baipadittaya
Quote by Dhathri Baipadittaya - ಭೂಮಿಗೆ ಬರುವ ಪ್ರತಿ ಜೀವಿಗೂ ದೇವರು ಖರ್ಚಿಗೆ ಕೊಟ್ಟು ಕಳಿಸುವ ಜಾಗತಿಕ ಕರೆನ್ಸಿಯೆಂದರೆ ಅದು ಪ್ರೀತಿ.

ವಿನಿಮಯಿಸಿಕೊಂಡವರು ನೆಮ್ಮದಿಯಿಂದ ಬಾಳುತ್ತಾರೆ.. 
.‌‌‌.ಬಚ್ಚಿಟ್ಟವರು ಬೋಳಾಗಿಯೇ ಉಳಿಯುತ್ತಾರೆ.

-:🌄ಅರುಣ್ಮಯಿ - Made using Quotes Creator App, Post Maker App
1 likes 0 comments
Dhathri Baipadittaya
Quote by Dhathri Baipadittaya - ಇರುವುದೊಂದೇ ಭೂಮಿ

ಇಲ್ಲೇ ಹುಟ್ಟು ಇಲ್ಲೇ ಸಾವು
ಇಲ್ಲೇ ನಮ್ಮ ಬದುಕು
ಇಲ್ಲೇ ಅಗ್ನಿ ಗಾಳಿ ನೀರು
ಇಲ್ಲೇ ಬಾನು ಬೆಳಕು
ಇಲ್ಲೇ ಪ್ರೀತಿ ಇಲ್ಲೇ ನೀತಿ 
ಇಲ್ಲೇ ರಾಗದ್ವೇಷ 
ಇಲ್ಲೇ ಭಾವ ಇಲ್ಲೇ ಬುದ್ಧಿ
ಇಲ್ಲೇ ನಮ್ಮ ಮೋಕ್ಷ

ನಮಗಿರುವುದೊಂದೇ ಭೂಮಿ
ಇದನು ಉಳಿಸಿ ಕೊಡಿ ಸ್ವಾಮಿ

🙏ವಿಶ್ವ ಭೂ ದಿನದ ಒಂದು ಸದಾಶಯ🌍

🌄 ಅರುಣ್ಮಯಿ - Made using Quotes Creator App, Post Maker App
2 likes 0 comments
Dhathri Baipadittaya
Quote by Dhathri Baipadittaya - ಇರುವುದೊಂದೇ ಭೂಮಿ

ಇಲ್ಲೇ ಹುಟ್ಟು ಇಲ್ಲೇ ಸಾವು
ಇಲ್ಲೇ ನಮ್ಮ ಬದುಕು
ಇಲ್ಲೇ ಅಗ್ನಿ ಗಾಳಿ ನೀರು
ಇಲ್ಲೇ ಬಾನು ಬೆಳಕು
ಇಲ್ಲೇ ಪ್ರೀತಿ ಇಲ್ಲೇ ನೀತಿ 
ಇಲ್ಲೇ ರಾಗದ್ವೇಷ 
ಇಲ್ಲೇ ಭಾವ ಇಲ್ಲೇ ಬುದ್ಧಿ
ಇಲ್ಲೇ ನಮ್ಮ ಮೋಕ್ಷ

ನಮಗಿರುವುದೊಂದೇ ಭೂಮಿ
ಇದನು ಉಳಿಸಿ ಕೊಡಿ ಸ್ವಾಮಿ

🙏ವಿಶ್ವ ಭೂ ದಿನದ ಸದಾಶಯ🌍

🌄 ಅರುಣ್ಮಯಿ - Made using Quotes Creator App, Post Maker App
1 likes 0 comments

Explore more quotes

Dhathri Baipadittaya
Quote by Dhathri Baipadittaya - ದೃಷ್ಟಿ

ಈ ಜಗತ್ತಿನಲ್ಲಿ ನಕಾರಾತ್ಮಕವಾದದ್ದು ಯಾವುದೂ ಇಲ್ಲ..
ನೋಡುವ ದೃಷ್ಟಿ ಸಕಾರಾತ್ಮಕವಾಗಿದ್ದರೆ
❤️🌍❤️

🌄ಅರುಣ್ಮಯಿ - Made using Quotes Creator App, Post Maker App
1 likes 0 comments