Shwetha,B profile
Shwetha,B
73 17 84
Posts Followers Following
Shwetha,B
Quote by Shwetha,B - FEB 14 ಪ್ರೇಮಿಗಳಂತೆ ಪ್ರೀತಿ ಮಾಡಿ 
ಅರ್ಧದಲ್ಲಿ ಬಿಟ್ಟೋಗೋ ಪ್ರೀತಿ ಬೇಡ 
may12 ರ ತಾಯಿಯಂತೆ ಪ್ರೀತಿ ಮಾಡಿ 
ಕೊನೆಯವರೆಗೂ ಇರುವಂತಹ 
ಪ್ರೀತಿ ಬೇಕು........

- ಶ್ವೇತಾ.ಬಿ✍️ - Made using Quotes Creator App, Post Maker App
4 likes 0 comments
Shwetha,B
Quote by Shwetha,B - ಕಥೆ ಹೇಳೋದ್ರಲ್ಲಿ  ಸತ್ಯ ಇರ್ಲಿ 
ಪ್ರೀತಿ ಮಾಡೋದ್ರಲ್ಲಿ 
ನಿಯತ್ತು ಇರ್ಲಿ 

 -ಶ್ವೇತಾ.ಬಿ✍️ - Made using Quotes Creator App, Post Maker App
3 likes 0 comments
Shwetha,B
Quote by Shwetha,B - ಹೈಸ್ಕೂಲಿನಲ್ಲಿ ಅವಳು ಕೊಟ್ಟ 
ನವಿಲುಗರಿ ಇನ್ನು ಒಂದು ಮರಿನೂ
ಹಾಕಿಲ್ಲ....!


ಅವಳು ನೋಡಿದ್ರೆ ಎರಡು ಮರಿ ಹಾಕಿ
ಮೂರನೇದಕ್ಕೆ ಮುಹೂರ್ತ
ನೋಡುತ್ತಿದ್ದಾಳೆ.....!!!!

-ಶ್ವೇತಾ.ಬಿ✍️ - Made using Quotes Creator App, Post Maker App
3 likes 0 comments
Shwetha,B
Quote by Shwetha,B -   ಕಪ್ಪು 
***********
ನಾ ಕಪ್ಪುವೆಂದು 
ಕೊರಗಬೇಡ 
ತಲೆಯ ಕೂದಲು ಕಪ್ಪು 
ನಾ ಕಪ್ಪುವೆಂದು 
ಮರುಗಬೇಡ 
ಹಿಂದೆ ಇರುವ ನೆರಳು ಕಪ್ಪು 
ನಾ ಕಪ್ಪುವೆಂದು 
ನೆನೆಯಬೇಡ 
ಕುಡಿ ಹುಬ್ಬ ಕಣ್ಣಿನ ರೆಪ್ಪೆಯು ಕಪ್ಪು 
ನಾ ಕಪ್ಪುವೆಂದು 
ಚಿಂತಿಸಬೇಡ 
ರಾತ್ರಿ  ಹೊತ್ತಿನ ಮೋಡವು ಕಪ್ಪು 
ನಾ  ಕಪ್ಪುವೆಂದು 
 ದುಃಖಿಸದಿರು
ಲೋಕ ಕಾಯಕ ಕೃಷ್ಣನು ಕಪ್ಪು 
ನಾ ಕಪ್ಪುವೆಂದು 
 ಅಳುಕದಿರು 
ಮೋಡವು ಕಪ್ಪಾಗಿಯೇ 
ಧರೆಯಲ್ಲಿ ಮಳೆ ಸುರಿವುದು
ನಾ ಕಪ್ಪುವೆಂದು 
ಶಪಿಸದಿರು
ವಿದ್ಯಾರ್ಥಿಗಳ ಭವಿಷ್ಯ ತುಂಬುವುದೇ 
ಕಪ್ಪು ಹಲಿಗೆಯಿಂದ
ನಾ ಕಪ್ಪುವೆಂದು 
ಬೈಯದಿರು 
ಕಪ್ಪು ಮಣ್ಣಿನಲ್ಲಿ ಅಡಗಿದೆ 
ಸುಗಂಧ ವಾಸನೆ
ಕಪ್ಪು ಕಪ್ಪು ಕಪ್ಪಿನಲ್ಲಿ ಮಿನುಗುವ ಚಂದಿರ 
  
-ಶ್ವೇತಾ.ಬಿ✍️
 - Made using Quotes Creator App, Post Maker App
2 likes 0 comments
Shwetha,B
Quote by Shwetha,B - ***ನಾ ವೇಶ್ಯ ಅಲ್ಲ***
-----------------------------

ನಾ ವೇಶ್ಯೆ ಅಲ್ಲ
ಕತ್ತಲೆಯ ರಾಣಿ 
ಕಾರಾಗೃಹದ ಹೆಣ್ಣು 
ನಿತ್ಯ ರೋಧನೆ
ವೇಶ್ಯಾವೃತ್ತಿ 
ಹೊಟ್ಟೆಪಾಡಿಗೆ ನಾ
ಮಂಚ ಏರಿದವಳು
ಅಂದ ಚಂದ ನೋಡಿ 
ವಿಮರ್ಶೆ ಮಾಡುವರು 
ಕಾಮಾಂಧರ ಕಾಮದ 
ಹಸಿವು ನಿಗಿಸಿದವಳು
ಸುಖ ಉಣ್ಣಲು ಬಂದವರು 
ಸುಟ್ಟು ಗಾಯ ಮಾಡುವವರು 
ಕೆನ್ನೆಯ ಮೇಲೆ ಬೆರಳಚ್ಚು 
ಮೂಡಿಸುವರು 
ದೀಪ ಹಾರಿಸಿ ದೇಹದ 
ರುಚಿ ನೋಡುವರು 
ಪಾಪದ ಕೆಲಸ ಮಾಡಿ 
ಹಣ ಚೆಲ್ಲಿ ಹೋಗುವರು 
ಹಸಿವಿಗಾಗಿ ಹಾಸಿಗೆ 
ಹಾಸಿದವಳು ನಾನು 
ಮೈ ಮುಟ್ಟಿದವರ
ಅವಳ ಮನವನಲ್ಲ 
ಮನಸ್ಸಾಕ್ಷಿ‌ ಒಪ್ಪದಿದ್ದರು
ಮೈ ಮಾರಿಕೊಂಡು 
ಜೀವನ ಸಾಗಿಸತಿಹಳು 
ಕೇವಲ...........
ಮಾಂಸ ಮುದ್ದೆಯಿಂದ 
ಕೂಡಿದ ದೇಹಕ್ಕೆ 
ಕಾದಿದ್ದ ಹದ್ದುಗಳೇ.....
ಕೇಳಿ????
ನಾ  ವೇಶ್ಯೆ  ಅಲ್ಲ 
ಬೆಲೆ ನೀಡಿದವರೇ 
ಬಿರುದು ನೀಡಿದವರೇ ನೀವೇ 
***ನಾ ವೇಶ್ಯೆ  ಅಲ್ಲ***

- ಶ್ವೇತಾ.ಬಿ✍️
 
 - Made using Quotes Creator App, Post Maker App
1 likes 0 comments
Shwetha,B
Quote by Shwetha,B - ಬೆಳದಿಂಗಳ ಶಶಿಯೊಂದಿಗೆ 
ಇರುಳು ನಾಚಿಸುವ 
ಈ ಜೋಡಿಯ ಸೊಬಗು 

ತಿಳಿ ತಂಗಾಳಿಯ ಸ್ಪರ್ಶದೊಂದಿಗೆ 
ಕಣ್ಮನ ಸೆಳೆವ 
ರೋಮಾಂಚನದ ಮೆರಗು

ಭೂಮಂಡಲದೊಂದಿಗೆ 
ಕಾರ್ಮೋಡವ  ಸರಿದು 
ತಾರೆಗಳ ಬೆಳಕು 

ಜೋಡಿಗಳ ಪಲ್ಲಂಗದೊಂದಿಗೆ 
ಶೋಭಿಸುವ 
ಒಲವೋತ್ಸವದ  ಕಾರಂಜಿ 

ತಾರೆಗಳೊಂದಿಗೆ ಪ್ರಜ್ವಲಿಸುವ 
ಬಾಹು ಬಂಧನದ ಚುಂಬನದೊಂದಿಗೆ
ನಗುವ ಹೂವಿನಂತೆ ಬಳುಕುವ
ನನ್ನಯ ಅನಿತಾ........

                   - ಶ್ವೇತಾ.ಬಿ✍️
 - Made using Quotes Creator App, Post Maker App
2 likes 0 comments
Shwetha,B
Quote by Shwetha,B - ದೇವರು ದೃಷ್ಟಿಯಲ್ಲಿ ಎಲ್ಲರೂ ಸಮಾನರು 
ಎಂಬುವುದು ಬೇಕಾಗಿಲ್ಲ; ಮನುಷ್ಯರ ದೃಷ್ಟಿಯಲ್ಲಿ 
ಎಲ್ಲರೂ ಸಮಾನರು ಎಂಬುವುದು ಬೇಕು...

-ಶ್ವೇತಾ.ಬಿ✍️ - Made using Quotes Creator App, Post Maker App
1 likes 1 comments
Shwetha,B
Quote by Shwetha,B - ನೆಮ್ಮದಿನಾ ನಾವು ಹುಡುಕೊಂಡು ಹೋಗ್ಬಾರ್ದು 
ನೆಮ್ಮದಿನಾ ನಾವೇ ಸೃಷ್ಟಿಸಿ ಬೇಕು 
ಜೀವನಕ್ಕೆ ನಾವು ಬೇಸರ ಕೊಡಬಾರದು
 ಜೀವನವನ್ನು  ಬೇಸರ ಕೊಡದೆ ರೀತಿಯಲ್ಲಿ ಇರಬೇಕು.............
ಜೀವನದಲ್ಲಿ adjustment ಇರಬೇಕು
ಜೀವನವನ್ನೇadjustment ಆಗ್ಬಾರ್ದು ........!

      - ಶ್ವೇತಾ.ಬಿ✍️
 - Made using Quotes Creator App, Post Maker App
3 likes 2 comments
Shwetha,B
Quote by Shwetha,B - ನಮ್ಮ ಗುಟ್ಟುಗಳೇ 
ಶತ್ರುಗಳಿಗೆ ಶಕ್ತಿಗಳು .......

      -ಶ್ವೇತಾ.ಬಿ✍️

 - Made using Quotes Creator App, Post Maker App
1 likes 0 comments
Shwetha,B
Quote by Shwetha,B - ಕಥೆನೂ ಅಲ್ಲ ,ಕವಿತೆನು ಅಲ್ಲ 
ಸುಮ್ನೆ ಬರರ್ದಿದ್ದು ಸುಮ್ನೆ ಒದ್ದಿಡಿ.....!

ನಿನ್ನ ಸಮಸ್ಯೆ ಏನು ಗೊತ್ತಾ ನೀನು ತುಂಬಾನೇ ಪ್ರಾಮಾಣಿಕವಾಗಿದ್ದು ಕಣ್ಣು ಮುಚ್ಚಿ ಅವರನ್ನ ನಂಬಿದ್ದು , ಮನಸ್ಸಿಗೆ ಹತ್ತಿರ ಮಾಡಿಕೊಂಡಿದ್ದು ವಾತ್ಸಲ್ಯ ತೋರ್ಸಿದ್ದು ನೀನು ಇಷ್ಟಪಟ್ಟವರಿಗೆ ತಾಯಿ ಪ್ರೀತಿ ಕೊಟ್ಟಿದ್ದು .ಅದು ಎಂಥವರ ಮೇಲೆ ಇಷ್ಟೆಲ್ಲಾ ಪ್ರೀತಿ ಚೆಲ್ಲಿದ್ದು ನಿನ್ನ ಎದೆಗೆ ಚೂರಿ ಹಾಕುವವರ ಕಲ್ಮಶ   ತುಂಬಿದ ಮನಸ್ಸುಗಳು,,,,,,,,,,,,,,,,,,
ನಂಬಿಕೆ ಇಟ್ಟ ವ್ಯಕ್ತಿ ಅವರಿಗಾಗಿ ಇರುಳು ಹಗಲು ನೋಡದೆ ಒಳಿತು ಮಾಡಿದ್ದು ..... 
ಪರ್ವಾಗಿಲ್ಲ ಬಿಡು ತಾಯಿ...... ನಿನಗೆ ಮಾಡಬೇಕು ಅನಿಸ್ತು ಮಾಡ್ದೆ ನೀನು ಅವರಿಗಾಗಿ ಮಾಡಿದ್ದಲ್ಲ ವ್ಯರ್ಥವಾಗಿ ಹೋಗಿಲ್ಲ ಬಿಡು ತಾಯಿ....... ಮನಸ್ಸ ಅಥವಾ ಮನಸೇ ಇಲ್ಲದವರ ಅಂತ ಬಂದಾಗ ನೀನು ಮನಸ್ಸಿನ ಮಾತು ಕೇಳ್ದೆ  ಇತರರು ಮಾತು ಆಲಿಸಿದೆ. ಅದೇ ಕಣಮ್ಮ ಇಷ್ಟೊಂದು ನೋವು ನೀನು ತಿಂದಿದ್ದು..... ದೇವರು ಇದ್ದಾನೋ ಇಲ್ವೋ ನನಗಂತೂ ಗೊತ್ತಿಲ್ಲ ಆದರೆ ನಿನ್ನ ನೋಡಿದಾಗೆಲ್ಲ ದೇವರು ಇಲ್ಲ ಅನ್ಸುತ್ತೆ.........!
 
- ಶ್ವೇತಾ.ಬಿ✍️ - Made using Quotes Creator App, Post Maker App
1 likes 0 comments

Explore more quotes

Shwetha,B
Quote by Shwetha,B - ಅಲಂಕಾರವಿಲ್ಲದವಳು 
ಅಹಂಕಾರವಿಲ್ಲದವಳು
ಆಡಂಬರವಿಲ್ಲದವಳು 
ಅವಳು ತುಂಬಾ ಸರಳ
ತುಂಡುಬಟ್ಟೆ ಹಾಕಲ್ಲ  
ಹಣೆಗೆ ಬಿಂದಿ ಮರೆಯಲ್ಲ 
ಪ್ರೀತಿಸೋಕೆ ಇಷ್ಟೇ ಸಾಕು 
ಇನ್ನೇನು  ಬೇಕಿಲ್ಲ 
ಬಹಳ..............

                - ಶ್ವೇತಾ.ಬಿ✍️

 - Made using Quotes Creator App, Post Maker App
2 likes 0 comments
Shwetha,B
Quote by Shwetha,B - ಅತ್ತಿದ್ದು ಸಾಕು 
ನಗಬೇಕು ನಾನು 
ಬಿದ್ದಿದುಸಾಕು ಎದ್ದು 
ನಿಲ್ಲಬೇಕು ನಾನು 
ಯಾರದೋ ಪ್ರೀತಿ 
ಹಂಬಲಿಸಿದ್ದು ಸಾಕು 
ನನ್ನನ್ನೇ ನಾನು ಪ್ರೀತಿಸುವುದ
ಕಲಿಯಬೇಕು ನಾನು 
ಯಾರಿಗಾಗಿಯೋ ಬದುಕಿದ್ದು ಸಾಕು 
ನನಗಾಗಿ ನಾನು ಬದುಕಬೇಕಿದೆ.....

         -ಶ್ವೇತಾ.ಬಿ✍️
 - Made using Quotes Creator App, Post Maker App
2 likes 1 comments
Shwetha,B
Quote by Shwetha,B - ?"life"?
*********

ಅಂದುಕೊಳ್ಳುವುದು------------ಆಸೆ
ಹೊಂದಿಕೊಳ್ಳುವುದೇ---------------ಜೀವನ


           -ಶ್ವೇತಾ.ಬಿ✍️
 - Made using Quotes Creator App, Post Maker App
1 likes 0 comments
Shwetha,B
Quote by Shwetha,B - ?"life"?
*********

ಅಂದುಕೊಳ್ಳುವುದು------------ಆಸೆ
ಹೊಂದಿಕೊಳ್ಳುವುದೇ---------------ಜೀವನ


           -ಶ್ವೇತಾ.ಬಿ✍️
 - Made using Quotes Creator App, Post Maker App
0 likes 0 comments
Shwetha,B
Quote by Shwetha,B - ವಾಸ್ತವ ಅಂದ್ರೆ 
ನಾವು Dp ಲಿ
ಇರುವಷ್ಟು ಚೆಂದ
ನಾವ್ಯಾರಿಲ್ಲ.....!

      -ಶ್ವೇತಾ.ಬಿ✍️
 - Made using Quotes Creator App, Post Maker App
2 likes 0 comments
Shwetha,B
Quote by Shwetha,B -  ನಂಬಿ ಬದುಕುವುದು ಬೇರೆ
ನಂಬಿಸುತ್ತಲೇ ಬದುಕುವುದು ಬೇರೆ
ನಂಬಿ ಬದುಕುವುದರಲ್ಲಿ
ಪ್ರೀತಿ ಇರುತ್ತದೆ,,,,,,,,,
ನಂಬಿಸುತ್ತಾ ಬದುಕುವುದರಲ್ಲಿ
ಸ್ವಾರ್ಥ ಮಾತ್ರ ಇರುತ್ತದೆ....!
                

           - ಶ್ವೇತಾ.ಬಿ✍️ - Made using Quotes Creator App, Post Maker App
2 likes 0 comments
Shwetha,B
Quote by Shwetha,B - ಅಪ್ಪ......

ಮರಳಿ ಬಾರದವ ನೀ
ನಾ ಹೇಗೆ ಕರೆಯಲಿ ನಿನ್ನನ್ನು 
ನನ್ನೆಯ ಕಂಬನಿ ಕಾಣಿಸದು ನಿನಗೆ 
ಹೇಳದೆ  ಹೋದೆ ನೀನು 
ನಾ ಯಾರಿಗೇಳಲಿ
 ನನ್ನೆಯ ನೋವು........
ಅಪ್ಪ.........


       -ಶ್ವೇತಾ.ಬಿ✍️ - Made using Quotes Creator App, Post Maker App
1 likes 0 comments
Shwetha,B
Quote by Shwetha,B - ನನಸಾಗದ ಕನಸು ಕನಸಾಗಿ ಉಳಿಯಿತು 
ನಕ್ಕು ಮರೆಯಲೇ, ಆತ್ತ ಮರೆಯಲೇ..........

-ಶ್ವೇತಾ.ಬಿ✍️ - Made using Quotes Creator App, Post Maker App
8 likes 0 comments
Shwetha,B
Quote by Shwetha,B - ಹೆಜ್ಜೆ ಪುಟ್ಟದ್ದೇ ಖುಷಿ ದೊಡ್ಡದು 
ನಿನ್ನಯ ಮೊಗವ ನೋಡುವಾಸೆ 
 ನೀ ನನ್ನಯ ನೋವು 
ಮರೆಸುವ ಶಕ್ತಿ ನೀ
ಈ ತಾಯಿಯ ಮುದ್ದ ಮಗಳು 
ಆಗುವೆಯ ನೀ.............!

                -ಶ್ವೇತಾ.ಬಿ✍️ - Made using Quotes Creator App, Post Maker App
1 likes 0 comments
Shwetha,B
Quote by Shwetha,B - "**ಯೋಚನೆ"**
"""""'''''''""""""""""""''''''''''''
ಕಳೆದು ಹೋದ ವ್ಯಕ್ತಿ 
ಮುಗಿದು ಹೋದ ಸಮಯ 
ಬಾರದೇ ಇರುವ ವಯಸ್ಸು 
ಚಿಂತಿಸಿದರೆ ಏನು ಫಲ.!!!!!!!!

-ಶ್ವೇತಾ.ಬಿ✍️ - Made using Quotes Creator App, Post Maker App
4 likes 0 comments

Explore more quotes

Shwetha,B
Quote by Shwetha,B - "**ಯೋಚನೆ"**
"""""'''''''""""""""""""''''''''''''
ಕಳೆದು ಹೋದ ವ್ಯಕ್ತಿ 
ಮುಗಿದು ಹೋದ ಸಮಯ 
ಬಾರದೇ ಇರುವ ವಯಸ್ಸು 
ಚಿಂತಿಸಿದರೆ ಏನು ಫಲ.!!!!!!!!

-ಶ್ವೇತಾ.ಬಿ✍️ - Made using Quotes Creator App, Post Maker App
0 likes 0 comments
Shwetha,B
Quote by Shwetha,B - ಬದುಕು ಬಣ್ಣದಿಂದ 
ಕೂಡಿರಬೇಕು ಹೊರತು 
ಬಣ್ಣ ಬದಲಿಸುವ ಊಸರವಳ್ಳಿಯ 
ಬದುಕು ಬೇಡ...........!!!!!!!
  

-ಶ್ವೇತಾ.ಬಿ✍️ - Made using Quotes Creator App, Post Maker App
0 likes 0 comments
Shwetha,B
Quote by Shwetha,B - ನಿನ್ನನ್ನು ಕಳೆದುಕೊಳ್ಳುವ ಮನಸ್ಸು 
ನನಗಿಲ್ಲ ಮತ್ತೊಂದು ಮನಸ್ಸು ಬಯಸುವ 
ಆಸೆ ಮೊದಲೇ ಇಲ್ಲ 
ಇದ್ದರೆ ಜೊತೆಯಾಗಿ 
ನಡೆದರೆ ನೆರಳಾಗಿ 
ಉಸಿರಿಗೆ ಉಸಿರಾಗಿ 
ಬದುಕಿಗೆ ಬೆಳಕಾಗಿ 
ಸುಮಧುರವಾದ ಜೀವನ ನಡೆಸುವೆ
 ನಾ ನಿನ್ನ ಜೊತೆಯಲ್ಲಿ.........

- ಶ್ವೇತಾ. ಬಿ ✍️ - Made using Quotes Creator App, Post Maker App
6 likes 0 comments
Shwetha,B
Quote by Shwetha,B - ಮನೆಯೊಳಗಿನ ಗಣ ಶತ್ರುಗಳು;
ಬಾಹ್ಯದಲಿ ಶತ್ರುಗಳನ್ನು ಸೃಷ್ಟಿಸುವರಯ್ಯ 
ಇದೇ ನೋಡು ನಮ್ಮ ಕಲಿಯುಗದ ಪರಿ ದೇವ.....!
         

--ಶ್ವೇತಾ.ಬಿ✍️ - Made using Quotes Creator App, Post Maker App
2 likes 2 comments
Shwetha,B
Quote by Shwetha,B - ಆಳಾಗಿ ದುಡಿದರು 
ಅರಸನಾ ಮೆರೆಯಬೇಕು
ಅವಮಾನ ಆದರೂ ಸಹ
 ಪ್ರೀತಿಯ ಅಭಿಮಾನ
ಇರುವವರು ನಾವು.......

         -ಶ್ವೇತಾ.ಬಿ✍️
 - Made using Quotes Creator App, Post Maker App
1 likes 0 comments
Shwetha,B
Quote by Shwetha,B - **ಪ್ರೀತಿಗೆ ಅಮ್ಮ.ಅಪ್ಪ**

 ಪ್ರೀತಿಯಾಅಪ್ಪಾ********
ಇಂದು ನಾನು ಮಾತನಾಡುವ ಪದಗಳು ಅಪ್ಪಾ.
 ನೀನಿದ್ದ ಕ್ಷಣಗಳು ನನ್ನ ಬದುಕಿಗೆ ಬೆಳದಿಂಗಳಂತೆ
ಅಪ್ಪ ಜವಾಬ್ದಾರಿಗಳ ಅದೆಷ್ಟು ಇದ್ದವೋ
 ಒಂದು ಸಾರಿಯಾದರೂ
 ನನ್ನ ಮುಂದೆ ಹೇಳಲಿಲ್ಲ .. 
ಆದಾಯವಿಲ್ಲದ ಜೀವನ ನಮ್ಮದು. ಅಂತಹ ಪರಿಸ್ಥಿತಿಯಲ್ಲಿ
 ನಮಗೆ  ಅಕ್ಷರ ಜ್ಞಾನ ಕಲಿಸಿದೆ .
ನನ್ನ ಮಗಳು ತಣ್ಣಗಿರಲಿ ಎಂದು ಅವಳ 
 ಕಲಿತ ವಿದ್ಯೆ  ಜೊತೆಯಲಿ ಇರಲಿ  ಎಂದು ನನಗೆ 
ಅಕ್ಷರದ ಉಡುಗೊರೆ ನೀಡಿದೆ.....
ಕಾಲೇಜ್ ಫೀಸ್ ಕೇಳಿದಾಗ ನೀನು ಎಲ್ಲಿಂದ  
ಹಣ ತರುತ್ತಿದ್ದೆ ಗೊತ್ತಿಲ್ಲ....
ಇಂದು ಹಣ ಕೊಡಲು ತಂದಿರುವೆ ಆದರೆ  
ಮನೆಯಲ್ಲಿ ನೀನೇ ಇಲ್ಲಾ.......😌
ನೀನಿಲ್ಲದ ಬದುಕು ನನಗೆ ಭಾರವಾಗಿದೆ
ಇಂದು ನಿನ್ನ ನೆನಪುಗಳೊಂದಿಗೆ 
ಬದುಕುವುದು ನನಗೆ ಅನಿವಾರ್ಯವಾಗಿದೆ............ಅಪ್ಪಾ......
ನೆನಪುಗಳ ಜೊತೆ ನಾನಿರುವ ಅಪ್ಪಾ😌

               -ಶ್ವೇತಾ.ಬಿ✍️
 - Made using Quotes Creator App, Post Maker App
3 likes 2 comments
Shwetha,B
Quote by Shwetha,B - ನನಗಾಗಿ ಕಾದಿದೆ
ನಿನ್ನೆಯ ಬಾಳಿನ
ಸುಂದರ ಕ್ಷಣಗಳಿಗೆ
ಪರಿವರ್ತನೆ ನೀಡಿದೆ
ಈ ಗಳಿಗೆ ಹರುಷದಿ
ಅಲಂಕರಿಸುವ ಆಸೆ  
ನಿನಗೆ ಗೆಳತಿ......

         -ಶ್ವೇತಾ. ಬಿ✍️ - Made using Quotes Creator App, Post Maker App
2 likes 0 comments
Shwetha,B
Quote by Shwetha,B - ಅನ್ಯರು ಮಾಡುವ ಅವಮಾನಗಳಿಂದ
ಇತರರು ಹೇಳುವ ಸುಳ್ಳುಗಳೇ ???
ನೋವು.........

      -ಶ್ವೇತಾ.ಬಿ✍️




 - Made using Quotes Creator App, Post Maker App
1 likes 0 comments
Shwetha,B
Quote by Shwetha,B - ಸ್ಥಾನ ದೊರೆಯದೆ ಇರಬಹುದು
ವಿದ್ಯೆದೊರೆತಿದೆ
ಅಧಿಕಾರ ದೊರೆಯದೆ ಇರಬಹುದು
ಅಹಂಕಾರ ದೊರೆತಿಲ್ಲ
ಉದ್ಯೋಗ ದೊರೆಯದೆ ಇರಬಹುದು
ಸದ್ಗುಣಗಳು ದೊರೆತಿದೆ......
 
-    ಶ್ವೇತಾ.ಬಿ✍️ - Made using Quotes Creator App, Post Maker App
0 likes 0 comments
Shwetha,B
Quote by Shwetha,B - ವಿದ್ಯೆ ವಿನಯದಿಂದ ಕೂಡಿರಬೇಕು
ಹೊರತು ಅಹಂಕಾರದಿಂದಾಲ್ಲ 
ಶ್ರೀಮಂತಿಕೆ ನಿನ್ನಲ್ಲಿರಬೇಕು
ಹೊರತು ಅಹಂಕಾರದಿಂದಾಲ್ಲ
ಉದ್ಯೋಗ ಮಾರ್ಗದರ್ಶನದಿಂದ 
ಕೂಡಿರಬೇಕು ಹೊರತು ಅಹಂಕಾರದಿಂದಾಲ್ಲ
ಅಧಿಕಾರ ಆದರ್ಶ ಗುಣಗಳಿಂದ ಕೂಡಿರಬೇಕು
ಹೊರತು ಅಹಂಕಾರದಿಂದಾಲ್ಲ
ಇರೋ ಮೂರು ದಿನಗಳ ಸಂತೆಯಲ್ಲಿ
ಅಹಂಕಾರ ಏಕೆ? ಮಾನವ...!!!

           -ಶ್ವೇತಾ.ಬಿ✍️ - Made using Quotes Creator App, Post Maker App
0 likes 0 comments

Explore more quotes

Shwetha,B
Quote by Shwetha,B - ನಡೆ ನಡೆ
ಪರಿಸರ ಉಳಿಸಿ 
ನೀರಿನ ಹಾಹಾಕಾರವ ಅಳಿಸಿ
ಗಿಡಗಳ ನೆಡಿ.........
ಮನೆಗೊಂದು ಮರ ಊರಿಗೊಂದು ವನ
ಬನ್ನಿ ಕೈಜೋಡಿಸೋಣ....
ಜಗವನು ಹಸಿರಿನಿಂದ ಕಂಗೊಳಿಸೋಣ
ವಾಯು ಜಲ ಶುದ್ಧ ಮಾಲಿನ್ಯಗಳಿಂದ
ಪರಿಸರ ಉಳಿಸಿ ಅದಕ್ಕಾಗಿ ಗಿಡಗಳ ನೆಡಿ
ಶೋಕಿಗಾಗಿ ನೆಡದಿರಿ ಸ್ವಂತಕ್ಕಾಗಿ ಮಾಡಿ
ನಮ್ಮ ಪ್ರಾಣವ ಉಳಿಸಿಕೊಳ್ಳುವತ್ತಾ ಇರಲಿ
ನಮ್ಮ ನಡೆ ! ಮಳೆ ಬೆಳೆಗಾಗಿ ಉಳಿಸೋಣ
ಕಾಡುಗಳನ್ನು ! ಬೆಳೆಸಿಕೊಳ್ಳೋಣ
ಪ್ರತಿ ಮನೆಯಲ್ಲಿ ಸಾಲುಮರದ
ತಿಮ್ಮಕ್ಕನಂತೆ ಪರಿಸರ ಪ್ರೇಮಿ ಆಗೋಣ..

                   -ಶ್ವೇತಾ.ಬಿ✍️ - Made using Quotes Creator App, Post Maker App
1 likes 0 comments
Shwetha,B
Quote by Shwetha,B - ಯೋಗ್ಯವಾದವರಿಗೆ ಮಾತ್ರ
ಕಣ್ಣೀರು ಹಾಕುವುದು........

          -ಶ್ವೇತಾ.ಬಿ✍️ - Made using Quotes Creator App, Post Maker App
2 likes 0 comments
Shwetha,B
Quote by Shwetha,B - ಹಣಕ್ಕಿಂತ ಗುಣ ಮುಖ್ಯ ಅಂದುಕೊಂಡೆ
ಹಣ ಗುಣವನ್ನೇ ಬದಲಾಯಿಸುತ್ತದೆ.....

        -ಶ್ವೇತಾ.ಬಿ - Made using Quotes Creator App, Post Maker App
0 likes 0 comments
Shwetha,B
Quote by Shwetha,B - "ಜ್ಞಾನ ಒಂದೇ ಗೆಲುವಿನ ದಾರಿ"

                -ಶ್ವೇತಾ.ಬಿ✍️ - Made using Quotes Creator App, Post Maker App
2 likes 0 comments
Shwetha,B
Quote by Shwetha,B - single ಇದೀನಿ ಎಂದು ಚಿಂತಿಸದಿರು
ಸಿಂಹ ಯಾವಾಗಲೂ single  ಆಗಿರುತ್ತದೆ

-ಶ್ವೇತಾ.ಬಿ✍️ - Made using Quotes Creator App, Post Maker App
2 likes 0 comments
Shwetha,B
Quote by Shwetha,B - ಒಂದು ದಿನ ದಿನಾಂಕ 2021 ಮಾರ್ಚ್ 20 ಈ ದಿನದಂದು ನನ್ನ ಅಪ್ಪನೊಂದಿಗೆ ಮಾತನಾಡುತ್ತಿದ್ದೆ. ಆಗ  ಒಬ್ಬ ವ್ಯಕ್ತಿ ನನ್ನ ಅಪ್ಪನ ಬಳಿಗೆ ಇಂಜೆಕ್ಷನ್ ಮಾಡಿಸಿಕೊಳ್ಳಲು ಬಂದಿದ್ದನು, ಅವರಿಗೆ ಅಪ್ಪ ಇಂಜೆಕ್ಷನ್ ಮಾಡಿ ಕಾಫಿ ಕೊಟ್ಟು ಆ ವ್ಯಕ್ತಿಯೊಂದಿಗೆ ತುಂಬಾ ಪ್ರೀತಿಯಿಂದ ವಿಶ್ವಾಸದಿಂದ  ಮಾತನಾಡಿಸಿ ನೀನು ಬೇಗನೇ ಗುಣಮುಖವಾಗುತ್ತೀರಿ, ಎಂದು ಭರವಸೆ ಕೊಟ್ಟನು. ಆ ವ್ಯಕ್ತಿ ಹೋದ ನಂತರ ನಾನು ಮತ್ತೆ ನನ್ನ ಅಪ್ಪನ ಬಳಿಗೆ ಹೋದೆ. ಆಗ ನಾನು ಹೇಳಿದೆ   ಅವರಿಗೆ ಯಾಕೆ? ನೀನು ಸಹಾಯ  ಮಾಡಿದೆ. ಅವರು ನಿನ್ನ ಮೇಲೆ   ಜಗಳವಾಡಿದರು . ಆಗ ನನ್ನ ಅಪ್ಪ  ನನಗೆ ಒಂದು ಮಾತು ಹೇಳಿದರು. ನೀನು ಯಾವಾಗಲೂ ನಿನ್ನ ಜೀವನದಲ್ಲಿ ಅಳವಡಿಸಿಕೊ..........  
ನಿನ್ನ ಬಳಿ ಸಹಾಯಕ್ಕೆ ಶತ್ರು ಬಂದರೆ ಮಾಡು
ನಿನ್ನ ನಿಂದಿಸಿದವರು ಎಂದು ನೀ ನಿಂದಿಸದಿರು
ಅಪಮಾನ ಮಾಡಿದವರು ಎಂದು ನೀ ಅಪಹಾಸ್ಯ ಮಾಡಿದರು
ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡು
ನಿನ್ನನ್ನು ಅಳಿಸಿದವರು ಎಂದು ನೀ ಅವರನ್ನು ಕಣ್ಣೀರು ತರಿಸದಿರು
ಬಾಯಿಗೆ ಬಂದಂತೆ ಬೈದರೆ ನೀ ಮೌನಿ ಆಗು
ನಿನ್ನ ಬಳಿ ಆ ದೇವರು ಅಂದರೆ ರಾಮಚಂದ್ರ ಪ್ರಭುವಿಗೆ (ವಿಷ್ಣು )  ಪ್ರೀತಿ ಪಾತ್ರಳಾಗುವೆ. 
"ರಾಮನಾಗಲು ಸಾಧ್ಯವಿಲ್ಲ; ರಾಮನ ಆದರ್ಶಗಳು ಪಾಲಿಸಲು ಸಾಧ್ಯ" ಎಂದು ಹೇಳಿದರು. ಆಗ ನಾನು ಹೇಳಿದೆ  ಅಪ್ಪ ನಾನು ರಾಮನಂತೆ ಸುಮ್ಮನಿರಲಾರೆ ! ಮಾಡದೇ ಇರುವ ತಪ್ಪಿಗೆ ನಾನು ಹೊಣೆ  ಆಗಲಾರೆ . ರಾಮ ಯಾರೋ ಮಾತು ಕೇಳಿ ಸೀತೆಯನ್ನು ಕಾಡಿಗೆ ಹಾಕಿದ    ಈ ಭೂಮಿ ಮೇಲೆ ಎಂದು ಹುಟ್ಟಲಾರೆ ,ಎಂದು ಭೂಗರ್ಭದಲ್ಲಿ ಚಿರಂಜೀವಿ ಯಾದಳು .ಆ  ದೇವರನ್ನೇ ಬಿಟ್ಟಿಲ್ಲ ಇನ್ನು ನಮ್ಮಂತ ಸಾಮಾನ್ಯ ನರ ಮಾನವರು ಹೇಗೆ ಬಿಡುತ್ತಾರೆ.   ಕಿತ್ತು ಕಿತ್ತು ತಿನ್ನುತ್ತಾರೆ ಅಪ್ಪ. 
ಹೀಗೆ ಇರುವಷ್ಟು    ಅಸಹಾಯಕಳು ಕಲಿಯುಗದಲ್ಲಿ ಇರಲು ಸಾಧ್ಯವಿಲ್ಲ ಅಪ್ಪ .
 ಅಪ್ಪನ ಫೋನು  ಬಂದಿತು.
ಅಲ್ಲಿಗೆ ನಮ್ಮ ಮಾತುಕತೆಗಳು ಅಂತ್ಯವಾಯಿತು. 

 - ಶ್ವೇತಾ.ಬಿ✍️ - Made using Quotes Creator App, Post Maker App
4 likes 1 comments
Shwetha,B
Quote by Shwetha,B -  ಆಗ ನಾನು ಮಾಲೀಕನಿಗೆ ಹೇಳಿದೆ ಹೀಗೆ ಸುಮ್ಮನಿರಬೇಡಿ. ಅವರು ನಮ್ಮ ದೇಶದಲ್ಲದವರಾಗಿರಬಹುದು. ಆದರೆ ಅವರಿಗೆ ನಮ್ಮ ದೇಶದ ಮೇಲೆ ಅಭಿಮಾನ ಗೌರವ ನಂಬಿಕೆ ಇಟ್ಟುಕೊಂಡು ಬಂದಿರುತ್ತಾರೆ ಆ ನಂಬಿಕೆಯನ್ನು ಉಳಿಸಿಕೊಂಡು ಹೋಗಬೇಕು, ಎಂದು ತಿಳಿಸಿದೆ. ಆ ಮಾಲೀಕ ಏನು ಉತ್ತರಿಸದೆ ತಲೆತಗ್ಗಿಸಿ ಸುಮ್ಮನಿದ್ದ. ಮತ್ತೆ ನಾವು ಶ್ರೀರಾಮನ  ದರ್ಶನಕ್ಕೆ ಹೋದೆವು. ಅಲ್ಲಿ ಶ್ರೀ ರಾಮನ ದರ್ಶನವನ್ನು ಮಾಡಿಕೊಂಡು ನನ್ನ ಆರಾಧ್ಯ ದೈವ ನನ್ನ ಶಕ್ತಿ ಆಂಜನೇಯ ಸ್ವಾಮಿ ದರ್ಶನಕ್ಕೆ ಹೋದೆವು. ಅಲ್ಲಿಂದ ನನ್ನ ತಂಗಿಯವರು ಮುಂದೆ ಹೋಗಿಬಿಟ್ಟಿದ್ದರು. ನಾನು ಒಬ್ಬಳೇ ಮೆಲ್ಲಗೆ ಬರುತ್ತಿದ್ದೆ. ಅಲ್ಲಿ ಇಬ್ಬರು ಹುಡುಗರು ಫೋಟೋ ತೆಗೆದುಕೊಳ್ಳುತ್ತಿದ್ದರು. ನನ್ನ ಹತ್ತಿರ ಬಂದು ಹಲೋ ಎಸ್ಕ್ಯೂಸ್ ಮಿ ಒಂದು ಫೋಟೋ ತೆಗ್ರೀ ಅಂದ್ರು ಸರಿ ಎಂದು ಫೋಟೋ ತೆಗೆದೆ. ಫೋಟೋ ತುಂಬಾ ಚೆನ್ನಾಗಿ ತೆಗೆದಿದ್ದೀರಿ ಇನ್ನು ೪ ಫೋಟೋ ತೆಗ್ರೀ ಅಂದ್ರು  ತೆಗೆದು ಕೊಟ್ಟೆ ಅವರು ತುಂಬಾ ಲಕ್ಷಣವಾಗಿದ್ದೀರಿ ಅಂದ್ರು  ನಾನು ಸುಮ್ಮನೆ ಹೋದೆ. ನನ್ನ ತಂಗಿಯವರು ಕಲ್ಲಿನ ರಥದಲ್ಲಿ ಇದೀವಿ ಬಾ ಅಂದ್ರು . ಅಲ್ಲಿಗೆ ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಂಡೆವು . ಮತ್ತೆ ಆ ಇಬ್ಬರು ಹುಡುಗ್ರು ಬಂದರು . ನನ್ನ ತಂಗಿಯನ್ನು ಅಕ್ಕ ನಿನ್ನ ಹೆಸರೇನು?   ಕೇಳಿದರು ಅವಳಿಗೆ ತುಂಬಾ ಕೋಪ ಬಂದಿತು. ಬಾಯಿಗೆ ಬಂದಂಗೆ ಬೈದಳು. ಆಗ ನಾನು ಐಸ್ ಕ್ರೀಮ್ ತೆಗೆದುಕೊಂಡು ಬಂದೆ ಅಲ್ಲಿಗೆ . ಮತ್ತೆ ಆ ಹುಡುಗರು ನನ್ನನ್ನು ನೋಡಿ ಬಂದ್ರು. ಅದು ಎಂಥ ಧೈರ್ಯ ಮೆಚ್ಚಲೇ ಬೇಕಾದದ್ದು. ನನ್ನ ತಂಗಿಯರ   ಎದರಿಗೆ  ನೀವು ನನ್ನ ಮದುವೆಯಾಗಿ ನಾನು ನಿಮ್ಮನ್ನ ರಾಣಿಯಂತೆ ನೋಡಿಕೊಳ್ಳುವೆ ಎಂದು ಹೇಳಿದರು. ಆಗ ನನಗೆ ತುಂಬಾ ಕೋಪ ಬಂತು. ಹಾಗೆ ಸುಮ್ಮನಾದೆ  ಸ್ವಾರಿ ನನಗೆ ಎಂಗೇಜ್ಮೆಂಟ್ ಆಗಿದೆ ಎಂದು ಸುಳ್ಳು ಹೇಳಿದೆ. ಅವರು ಏನು ಮಾತನಾಡದೆ ಸುಮ್ಮನೆ ಹೋದರು. ಆಗ ನನ್ನ  ತಂಗಿಯರು ತುಂಬಾ ತಮಾಷೆ ಮಾಡಿದರು. ಏನೇ ಅಕ್ಕ ನಿನ್ನ ನೋಡಿ 30 ನಿಮಿಷದಲ್ಲಿ ಪ್ರೀತಿ ಹುಟ್ಟಿದೆ ಅದು ಹೇಗೆ ಕಣೆ ಎಂದು ಹೇಳಿದರು ಅದಕ್ಕೆ ಏನು ಉತ್ತರಿಸದೆ ಸುಮ್ಮನೆ ಇದ್ದೆ. ಆಗ ಇನ್ನೊಬ್ಬ ತಂಗಿ ಅಕ್ಕ ಅವನು ನಿಜವಾಗಿಯೂ ಹೃದಯದಿಂದ ಬಂದಿರುವ ಪ್ರೀತಿಯ ಮಾತುಗಳು ಅಂದಳು ಅಲ್ಲಿಗೆ ಹಂಪಿ ವಿಶ್ವವಿದ್ಯಾಲಯ ಬಂದಿತು.

- ಶ್ವೇತಾ.ಬಿ✍️ - Made using Quotes Creator App, Post Maker App
1 likes 0 comments
Shwetha,B
Quote by Shwetha,B - ಒಂದು ದಿನ ನಾನು ಮತ್ತು ನನ್ನ ತಂಗಿಯರ ಜೊತೆ ಇತಿಹಾಸ ಪುಟಗಳಲ್ಲಿ ರಾರಾಜಸುತ್ತಿರುವ ವಿಶ್ವವಿಖ್ಯಾತ ಹಂಪಿಗೆ ಹೋಗಿದ್ವಿ. ಅಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಕಂಡು ನಾನು ಓದಿದ ಎಲ್ಲ ನೆನಪಾಯಿತು. ಬೇಸರ ಕೂಡ ಆಯ್ತು. ನಾನು ಅಂದುಕೊಂಡೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಶಿಲ್ಪಕಲಾ ಕೃತಿಗೆ ಪುನರುಜ್ಜೀವ ತುಂಬಿದರೆ ಎಷ್ಟು ಚೆಂದ ಕಾಣುತ್ತದೆ. ಸರಿ ನನ್ನ ಕಥೆಯನ್ನು ಶುರು ಮಾಡ್ತೀನಿ, ನಾನು ನನ್ನ ತಂಗಿಯರ ಜೊತೆ ಹಂಪಿ ಗೋಪುರದ ಹತ್ತಿರ ಫೋಟೋ ತೆಗಿತಾ ನಿಂತಿದೆ . ಆಗ ಒಂದು ಹುಡುಗ ಗುಂಪು ಬರ್ತಾ ಇತ್ತು. ನನ್ನ ಗಮನ ಫೋಟೋ ತೆಗಿತಾ ಇದ್ದ ಆ ಹುಡುಗ ಗುಂಪಿನ  ಕಡೆ ಹೋಯ್ತು. ಅಲ್ಲಿ ಇಬ್ಬರು ಬಿಳಿ ಹುಡ್ಗೀರು ಇದ್ದರು. ಆ ಗುಂಪು ಬಿಳಿ ಹುಡುಗಿಯರ ಹತ್ತಿರ ಹೋಯಿತು. ಹಾಯ್ ಎಂದು ಹೇಳಿದರು. ಆ ಹುಡ್ಗೀರು ಏನು  ಉತ್ತರಿಸುವುದಿಲ್ಲ.  ಆಗ  ನಾವು ಕೂಡ ಅಂಗಡಿಯಲ್ಲಿ ಎಳನೀರು ಕುಡಿತ  ನಿಂತಿದ್ವಿ ಆ ಹುಡ್ಗರ  ಗುಂಪಿನ ಒಬ್ಬ ವ್ಯಕ್ತಿ ಬಿಳಿ ಹುಡುಗಿಯರ ಮೇಲೆ ಕೆಟ್ಟ ವರ್ತನೆ ತೋರ್ಪಡಿಸಿದನು ಆಗ ನನಗೆ ತುಂಬಾ ಕೋಪ ಬಂದಿದೆ.  ಹೊಡೆಯಲು ಹೊರಟೆ ನನ್ನ ತಂಗಿಅವರು ಬೇಡ ಅಕ್ಕ ಸುಮ್ಮನೇ ಇರು ನಮ್ಮ ಮೇಲೆ ಕೂಡ ಬರುವನು ಅಂದರು  , ಆದರೂ ನನ್ನ ಕೈಯಿಂದ ಆಗಲಿಲ್ಲ  ಅಲ್ಲಿರುವವರೆಲ್ಲರೂ ಸುಮ್ಮನೆ ನೋಡುತ್ತಾ ನಿಂತಿದ್ದರು . ಆಗ ನನಗೆ ಒಂದು ಉಪಾಯ ಹೊಳೆಯಿತು ಅಂಗಡಿ ಮಾಲೀಕನ ಹತ್ತಿರ ಜೋರಾಗಿ ಜೋರಾಗಿಯೇ ಜಗಳವಾಡದೆ ಆಗ ಎಲ್ಲರೂ ಗುಂಪು ಗೂಡಿದರು ಆಗ ಆ ಹುಡುಗರ ಗುಂಪು ಆ ಬಿಳಿ ಹುಡ್ಗೀರನ್ನು ಬಿಟ್ಟು ಹೋಯಿತು. ಆಗ ಬಿಳಿ ಹುಡ್ಗೀರು ಕನ್ನಡ ಮಾತನಾಡದೆ ಬಾರದ   ಬಿಳಿಯರಿಗೆ ಅರ್ಥವಾಯಿತು . ಅವರು ಥ್ಯಾಂಕ್ ಯು ಮೈ ಡಿಯರ್ ಫ್ರೆಂಡ್ ಎಂದು ಅಪ್ಪಿಕೊಂಡು ಸಿಹಿ ಮುತ್ತನ್ನು ನೀಡಿದರು.

 -ಶ್ವೇತಾ.ಬಿ✍️ - Made using Quotes Creator App, Post Maker App
1 likes 0 comments
Shwetha,B
Quote by Shwetha,B - ಒಂದು ದಿನ ನಾನು ಮತ್ತು ನನ್ನ ತಂಗಿಯರ ಜೊತೆ ಇತಿಹಾಸ ಪುಟಗಳಲ್ಲಿ ರಾರಾಜಸುತ್ತಿರುವ ವಿಶ್ವವಿಖ್ಯಾತ ಹಂಪಿಗೆ ಹೋಗಿದ್ವಿ. ಅಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಕಂಡು ನಾನು ಓದಿದ ಎಲ್ಲ ನೆನಪಾಯಿತು. ಬೇಸರ ಕೂಡ ಆಯ್ತು. ನಾನು ಅಂದುಕೊಂಡೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಶಿಲ್ಪಕಲಾ ಕೃತಿಗೆ ಪುನರುಜ್ಜೀವ ತುಂಬಿದರೆ ಎಷ್ಟು ಚೆಂದ ಕಾಣುತ್ತದೆ. ಸರಿ ನನ್ನ ಕಥೆಯನ್ನು ಶುರು ಮಾಡ್ತೀನಿ, ನಾನು ನನ್ನ ತಂಗಿಯರ ಜೊತೆ ಹಂಪಿ ಗೋಪುರದ ಹತ್ತಿರ ಫೋಟೋ ತೆಗಿತಾ ನಿಂತಿದೆ . ಆಗ ಒಂದು ಹುಡುಗ ಗುಂಪು ಬರ್ತಾ ಇತ್ತು. ನನ್ನ ಗಮನ ಫೋಟೋ ತೆಗಿತಾ ಇದ್ದ ಆ ಹುಡುಗ ಗುಂಪಿನ  ಕಡೆ ಹೋಯ್ತು. ಅಲ್ಲಿ ಇಬ್ಬರು ಬಿಳಿ ಹುಡ್ಗೀರು ಇದ್ದರು. ಆ ಗುಂಪು ಬಿಳಿ ಹುಡುಗಿಯರ ಹತ್ತಿರ ಹೋಯಿತು. ಹಾಯ್ ಎಂದು ಹೇಳಿದರು. ಆ ಹುಡ್ಗೀರು ಏನು  ಉತ್ತರಿಸುವುದಿಲ್ಲ.  ಆಗ  ನಾವು ಕೂಡ ಅಂಗಡಿಯಲ್ಲಿ ಎಳನೀರು ಕುಡಿತ  ನಿಂತಿದ್ವಿ ಆ ಹುಡ್ಗರ  ಗುಂಪಿನ ಒಬ್ಬ ವ್ಯಕ್ತಿ ಬಿಳಿ ಹುಡುಗಿಯರ ಮೇಲೆ ಕೆಟ್ಟ ವರ್ತನೆ ತೋರ್ಪಡಿಸಿದನು ಆಗ ನನಗೆ ತುಂಬಾ ಕೋಪ ಬಂದಿದೆ.  ಹೊಡೆಯಲು ಹೊರಟೆ ನನ್ನ ತಂಗಿಅವರು ಬೇಡ ಅಕ್ಕ ಸುಮ್ಮನೇ ಇರು ನಮ್ಮ ಮೇಲೆ ಕೂಡ ಬರುವನು ಅಂದರು  , ಆದರೂ ನನ್ನ ಕೈಯಿಂದ ಆಗಲಿಲ್ಲ  ಅಲ್ಲಿರುವವರೆಲ್ಲರೂ ಸುಮ್ಮನೆ ನೋಡುತ್ತಾ ನಿಂತಿದ್ದರು . ಆಗ ನನಗೆ ಒಂದು ಉಪಾಯ ಹೊಳೆಯಿತು ಅಂಗಡಿ ಮಾಲೀಕನ ಹತ್ತಿರ ಜೋರಾಗಿ ಜೋರಾಗಿಯೇ ಜಗಳವಾಡದೆ ಆಗ ಎಲ್ಲರೂ ಗುಂಪು ಗೂಡಿದರು ಆಗ ಆ ಹುಡುಗರ ಗುಂಪು ಆ ಬಿಳಿ ಹುಡ್ಗೀರನ್ನು ಬಿಟ್ಟು ಹೋಯಿತು. ಆಗ ಬಿಳಿ ಹುಡ್ಗೀರು ಕನ್ನಡ ಮಾತನಾಡದೆ ಬಾರದ   ಬಿಳಿಯರಿಗೆ ಅರ್ಥವಾಯಿತು . ಅವರು ಥ್ಯಾಂಕ್ ಯು ಮೈ ಡಿಯರ್ ಫ್ರೆಂಡ್ ಎಂದು ಅಪ್ಪಿಕೊಂಡು ಸಿಹಿ ಮುತ್ತನ್ನು ನೀಡಿದರು.

 -ಶ್ವೇತಾ.ಬಿ✍️ - Made using Quotes Creator App, Post Maker App
1 likes 0 comments
Shwetha,B
Quote by Shwetha,B - ಬೆಲೆ ಇಲ್ಲದ ಜಾಗದಲಿ
 ಕಣ್ಣೀರು ಹಾಕಿದೆ
ಅಹಂಕಾರ ಇರುವ ಜಾಗದಲಿ
 ಮೌನಿಯಾದೆ
ನನ್ನನ್ನು ಟೀಕಿಸಿದವರು 
ಚುಚ್ಚು ಮಾತುಗಳಿಗೆ
ನನ್ನನ್ನು ನಾ ಪರಿಚಯಿಸಿದೆ 
ಅವರಿಗೆ..........
 
-ಶ್ವೇತಾ.ಬಿ✍️ - Made using Quotes Creator App, Post Maker App
2 likes 0 comments

Explore more quotes

Shwetha,B
Quote by Shwetha,B - ಸೋತ ಜಾಗದಲ್ಲಿ ಗೆಲುವಿನ ಹರ್ಷ ಚಿಮ್ಮಲಿ


-ಶ್ವೇತಾ.ಬಿ✍️ - Made using Quotes Creator App, Post Maker App
0 likes 0 comments
Shwetha,B
Quote by Shwetha,B - ಎಲ್ಲಿದ್ದಾಯ  ಅಂತ ಗೊತ್ತಿಲ್ಲ 
ಆದ್ರೆ ಭೂಮಿಯ
ಯಾವ್ದೋ ದಿಕ್ಕಿನಲಿ 
ನನಗೋಸ್ಕರ ಹುಟ್ಟಿರ್ತಿಯಾ
ಹೇಗಿದ್ದೀಯಾ ಅಂತ ಗೊತ್ತಿಲ್ಲ 
ಆದ್ರೆ ನನ್ನನ್ನು ಅಂದ್ಮೇಲೆ 
ಅರಸನಾಗಿರುತ್ತಿಯಾ
ಹೆಸರೇನಂತ ಗೊತ್ತಿಲ್ಲ ಆದ್ರೆ
ನನ್ನ ಹೆಸರಿನ ಮೊದಲು 
ನಿನ್ನ ಹೆಸರು ಬೆರೆತಿರುತ್ತದೆ
ಮುಖಮುಖಿ ಯಾವಾಗ ಗೊತ್ತಿಲ್ಲ
ಆದ್ರೆ ಜಾಸ್ತಿ ನಿರೀಕ್ಷೆಯಲಿ ಇಲ್ಲ
ನಿನಗಾಗಿ ಕಾಯ್ತಿರ್ತಿನಿ..........
  
    -ಶ್ವೇತಾ.ಬಿ✍️ - Made using Quotes Creator App, Post Maker App
3 likes 0 comments
Shwetha,B
Quote by Shwetha,B - ಅವ್ರೆ ಕಾಳು ಕಣ್ಣಿನವನು
ಗುಂಟೂರುಕಾರದ ಮಾತಿನವನು
ಕಣ್ಣಿಗೆ ಕಾಣ್ಸಿಲ್ಲ ಕೈಯಿಗೆ  ಸಿಕ್ಕಿಲ್ಲ
ಟೊಮೋಟೊಯಂತ ಮುಖವುಳ್ಳವನು
ಕೈ ಬೀಸ್ಕೊಂಡು ಕನಸಿಗೆ ಬರ್ತಾನೆ
ನಿಂತತುನಿಲ್ಲಲ್ಲ ಕುತಂತ್ರ ಕೂರಲ್ಲ
ಬಟಾಣಿಯಂತೆ ಉರುಳುವನು
ಕವಿತೆಯಲಿ ಜೀವಂತ ಅವನು
ಕಲ್ಪನೆಯಲಿ ಮಾತ್ರ ಸ್ವಂತ ಅವನು
ಪ್ರೀತಿಯ ಬಾಗಿಲಿಗೆ ಬಂದು ಬೆಲ್ ಮಾಡ್ಡಾಗ
ಬಾಗಿಲು ತೆಗೆದು ನೋಡಿ ಹೇಳ್ತೀನಿ
ಅವನು ಯಾರು ಅಂತಾ..........

-ಶ್ವೇತಾ.ಬಿ✍️
 - Made using Quotes Creator App, Post Maker App
1 likes 0 comments
Shwetha,B
Quote by Shwetha,B - "HAPPY NEW YEAR"
*******************

ಮನದಲಿ ಪ್ರೀತಿ ಇರಲಿ 
ಮೊಗದಲಿ ನಗು ಇರಲಿ
 ಹೃದಯದಲಿ ಕರುಣೆ ಇರಲಿ 
ಕಂಗಳಲಿ ಕನಸಿರಲಿ
 ಕೈಗಳಲಿ ಹಾರೈಕೆ ಇರಲಿ
ತುಟಿಗಳಲಿ ಸಿಹಿ ಮಾತಿರಲಿ
2024ರ    ದಿನಗಳು 
ಸಂತಸದಿಂದ ತುಂಬಿರಲಿ
"ಹೊಸವರ್ಷದ ಹಾರ್ದಿಕ ಶುಭಾಶಯಗಳು"

              -ಶ್ವೇತಾ.ಬಿ✍️ - Made using Quotes Creator App, Post Maker App
0 likes 0 comments
Shwetha,B
Quote by Shwetha,B - ಅರ್ಥವಿಲ್ಲದ ಪ್ರಶ್ನೆಗಳು
ಅರ್ಥವಿದ್ದರೂ ನೀಡಿದ ಉತ್ತರಗಳು
ಅರ್ಥವಿದ್ದು ಅರ್ಥವಿಲ್ಲದ ನೋವುಗಳು
ನೆಮ್ಮದಿ ಇಲ್ಲದ ದಿನಗಳು
ಮರೆತು ಹೋದ ಮನಸ್ಸುಗಳು
ಮರೆಯದೆ ಬರುತ್ತಿರುವ ಕಣ್ಣೀರುಗಳು
ನಿದ್ದೆ ಇಲ್ಲದ ರಾತ್ರಿಗಳು
ಕಳೆದು ಹೋದ ಹಗಲುಗಳು
ಸಮಯದ ಜೊತೆ 
ಹೋಗುತ್ತಿರುವ ವರ್ಷಗಳು
ಗೊತ್ತಿದ್ದರೂ ಗೊತ್ತಿಲ್ಲದ ನಟನೆಗಳು
ಬದುಕು ಜಟಕಾಬಂಡಿಯಾದರೆ
ಜಟಕಾ ಬಂಡಿ ಅಲ್ಲದ ಜೀವನ
ಸಮಯದಲಿ ಸಾಗಿದ ಜೀವನ......

        -ಶ್ವೇತಾ. ಬಿ✍️ - Made using Quotes Creator App, Post Maker App
0 likes 0 comments
Shwetha,B
Quote by Shwetha,B - *"2023"*


ಅವಮಾನಿಸುವವರು
ಕಡೆಗಣಿಸುವವರು
ಹೀಯಾಳಿಸಿದವರು
ಶಪಿಸುವವರು
ಅಹಂ ನಿಂದ ವರ್ತಿಸಿದವರು
ಅಪಹಾಸ್ಯ ಮಾಡಿದವರು
ಹೊಸ ಪರಿಚಯದ ವ್ಯಕ್ತಿಗಳು
ನಗು ಮತ್ತು ಅಳು, ಸೋಲುಗಳಲ್ಲಿ
2023ರಲ್ಲಿ ಕಲಿತ ಪಾಠಗಳು 
ಮುಗಿದು ಹೋದ ಆ ದಿನಗಳು
ಮುಂದಿನ ಹೊಸ ಅಧ್ಯಾಯ 
2024ರ ಕಲಿಯುವುದಕ್ಕೆ ಸಿದ್ದಳು ನಾ........

-ಶ್ವೇತಾ.ಬಿ✍️ - Made using Quotes Creator App, Post Maker App
0 likes 0 comments
Shwetha,B
Quote by Shwetha,B - ""read""
***********
DREAM BIG
SET GOAL
MAKE PLAN
GET TO WORK
TRICKS PLAN
STICK PLAN
REACH THE GOAL
  
        -Shwetha,b✍️ - Made using Quotes Creator App, Post Maker App
5 likes 2 comments
Shwetha,B
Quote by Shwetha,B - ದಯವಿಟ್ಟು
ಆ  panta shirt , insult ಹಾಕ್ಕೊಂಡು
ಆ ತರ ಲುಕ್ ಮಾತ್ರ ಕೊಡ್ಬೋಡ
❤️ದ  ಬಡಿತ ಜಾಸ್ತಿ ಆಗಿ ಜೀವ
ಹೋದ್ರೆ ಹೋಗುತ್ತದೆ
ಆದರೆ .................
LIC ಮಾಡ್ಸಿಲ್ಲ..........!

           -ಶ್ವೇತಾ.ಬಿ✍️
 - Made using Quotes Creator App, Post Maker App
1 likes 0 comments
Shwetha,B
Quote by Shwetha,B - ಕೋಟಿ ಜನ ಮೆಚ್ಚೋ
ನಾ ವಿರಾಟ್ ಕೊಹ್ಲಿ ಯಂತಹ
ಆಟಗಾರ್ತಿ ಅಲ್ಲ....
ನನ್ನಲ್ಲಿ ಬರೀ ತಪ್ಪುಗಳನ್ನು
 ಹುಡುಕೋ  ವ್ಯಕ್ತಿ ನಾ

          -ಶ್ವೇತಾ.ಬಿ✍️ - Made using Quotes Creator App, Post Maker App
2 likes 0 comments
Shwetha,B
Quote by Shwetha,B - Never look down on
anyone everyone has
their own individual capability ...

-shwetha .b✍️ - Made using Quotes Creator App, Post Maker App
5 likes 2 comments

Explore more quotes