anandakavi profile
anandakavi
606 44 1
Posts Followers Following
anandakavi
Quote by anandakavi - ಸಣ್ಣ ಕಥೆ 
ಶೀತಲ ಸಮರ

ಕರ್ಣ ಹಾಗೂ ಶೀತಲ್ ಪ್ರಾಥಮಿಕ ಶಾಲೆಯಿಂದ ಜೊತೆಗೇ ಓದಿದವರು.ಮೆಟ್ರಿಕ್ ನಂತರ ಉನ್ನತ ಶಿಕ್ಷಣ ಪಡೆಯಲು ಕರ್ಣ ಬೇರೆ ಊರಿಗೆ ಹೋದ ಶೀತಲ್ ಅಲ್ಲೇ ಕಾಲೇಜಿನಲ್ಲಿ ಎಂ ಎಸ್ಸಿ ಮಾಡಿದಳು ವರ ನೋಡುವ ಕಾರ್ಯವೂ ಶುರುವಾಗಿತ್ತು..ಶಾಲೆಯ ರಿ ಯೂನಿಯನ್ಗೆ  ಅಂತ ಎಲ್ಲಾರನ್ನ
ಕರೆಸಲಾಯಿತು..ಆರು ವರ್ಷದ ಬಳಿಕ ನೋಡಿದ ಎಲ್ಲರೂ ಅವರವರ ಪರಿಚಯ ಹಂಚಿಕೊಂಡರು..ಶೀತಲ್ ಕರ್ಣ ತಮ್ಮ ದಿನಗಳ ನೆನೆಯುತ್ತಾ ಮನಸಿಗೆ ಹತ್ತಿರವಾದರು..
ಎಲ್ಲೋ ಒಂದು ಕಡೆ ಪ್ರೇಮಾಂಕುರವಾಗಿತ್ತು..ನಾಚುತ್ತಾ ಕರ್ಣ ಮತ್ತೆ ಸಿಗೋಣವೇ ಅಂದಾಗ ಶೀತಲ್ ಕಣ್ಣಲ್ಲಿ ಸಂತೋಷವೇ ಹರಿಯಿತು..ಆಗ ಕರ್ಣ ನಿನಗೆ ಒಪ್ಪಿಗೆ ಇದ್ದರೆ ನಿಮ್ಮ ಮನೆಗೆ ಬಂದು ಕೇಳಲೇ ಅಂದಾಗ ನಾಚಿ ನೀರಾದಳು..ಅಲ್ಲಿದ ಎಲ್ಲರೂ ಬೀಳ್ಕೊಟ್ಟು ನಡೆದರು..
ಬ್ರೇಕಿಂಗ್ ನ್ಯೂಸ್ ಕರಾವಳಿಯ ಬಸ್ಸೊಂದು ರಾತ್ರಿ ಉರುಳಿ ಹತ್ತು ಜನ ಸತ್ತಿದ್ದಾರೆ...ಶೀತಲ್ ಹೃದಯ ಜೋರಾಗಿ ಬಡಿಯಲಾರಂಬೀಸಿತು... ಮತ್ತೆ ಮತ್ತೆ ಅದೇ ನ್ಯೂಸ್...ಅಲ್ಲೇ ಇಡಿ ಕರ್ಣನ ಪೋನ್ ಟ್ರೈ ಮಾಡಿದಳು...ಮಾತು ಬರುತ್ತಿಲ್ಲ ಕಣ್ಣಲ್ಲಿ ನೀರು ಎತ್ತೋ ಫೋನ್ ಅನ್ನೋ ಮನಸು..ಹತ್ತು ನಿಮಿಷ ಆದರೂ ಎತ್ತಲಿಲ್ಲ ಅಲ್ಲೇ ಕುಳಿತು ಬಿಟ್ಟಳು... ಅಷ್ಟರಲ್ಲಿ ಅಕಡೆಯಿಂದ ರಿಂಗ್ ಆಯ್ತು... ಹೆಲೋ ಶೀತಲ್ ..
ಮರಳಿ ಹೋದ ಜೀವ ಬಂದಂತಾಯ್ತು...ನೆನ್ನೆ ನನಗೆ ನಿನ್ನ ಬಿಟ್ಟು ಹೋಗಲು ಮನಸ್ಸಾಗಲಿಲ್ಲ ಅಂತ ಟಿಕೆಟ್ ಕ್ಯಾನ್ಸಲ್ ಮಾಡ್ದೆ...ಇವತ್ತು ನೀನು ಫ್ರೀ ಇದ್ರೆ ನಾವು ಬೆಟ್ಟಿ ಆಗಬಹುದಾ...ಅಂದಾಗ ಶೀತಲ ಸಮರ ಮುಗಿದು ಶಾಂತವಾಗಿತ್ತು.


✍️ಆನಂದಕವಿ - Made using Quotes Creator App, Post Maker App
0 likes 0 comments
anandakavi
Quote by anandakavi - *ತುಂತುರು*

ತುಂತುರು ಮಳೆಯ ಕರೆದು
ಹನಿ ಹಾನಿಯಾಗಿ ಸುರಿದು 
ಮಳೆಯಾಗಿ ನದಿಗೆ ಹರಿದು
ಸಾಗರವ ಸೇರುವ ವೈಯ್ಯಾರ 
ಗುಡ್ಡ ಬೆಟ್ಟಗಳ ಝೇಂಕಾರ 


ತುಂತುರು ಹನಿಯ ವೈಯ್ಯಾರ 
ನದಗೆ ಸೇರುವ ನಿನ್ನ ಆತುರ
ಮೊಳಕೆಯೊಡೆದು ಬಿತ್ತಿ ಹಸಿರ 
ಬೆಟ್ಟ ಗುಡ್ಡಗಳ ನಡುವೆ ಸಂಚಾರ
ಸಾಗರವ ಸೇರುವೆ ನೀನು ನಿರಂತರ
 
✍️ ಆನಂದಕವಿ - Made using Quotes Creator App, Post Maker App
1 likes 0 comments
anandakavi
Quote by anandakavi - ಜನನ ಮರಣದ ನಡುವೆ ಜೀವನ
ಉತ್ತಮ ಬಾಳ್ವೆಯೇ ಸಂಜೀವನ
ಸಹಕಾರ ಸಹಚಾರವೇ ಸಂಕಲನ
ನೆಡೆದು ಬಂದ ಹಾದಿಯೇ ಕವನ
ಪ್ರೀತಿಸಿದವರು ಹಾರೈಸುವ ಸುದಿನ
ಅದುವೇ ನಿಮ್ಮ ಹರುಷ ತುಂಬಿದ 
ಜನ್ಮದಿನ....

ಆನಂದ ಕವಿ - Made using Quotes Creator App, Post Maker App
0 likes 0 comments
anandakavi
Quote by anandakavi - ಗಿರಿಜಾ

ಗಿಣಿಮೂಗಿನ ಚೆಲುವೆ ಗಿರಿಜಾ
ವಿಶ್ವನಾಥನ ಅರ್ಧಾಂಗಿ ಗಿರಿಜಾ
ಸರಳ  ಸುಂದರ  ಸಹಜ ನೀರಜ 
ನಡೆ ನುಡಿಗಳ ಭಾವಗಳ ಕನಜ 

ಉತ್ತಮ ಪರಿಕಲ್ಪನೆ ಸರಳ ಬದುಕು
ಆರೋಗ್ಯವೆ ಸಿರಿ ಕಲಿಕೆಯೇ ಸೊತ್ತು
ಉತ್ಸಾಹ ಚೈತನ್ಯದ ಪ್ರೀತಿಯ ಸರಕು
ಇರುವಳು ಸದಾ ನಗು ಮುಖವ ಹೊತ್ತು

ಮಕ್ಕಳಿಗೆ ಸಂಸ್ಕಾರ ಸ್ಪೂರ್ತಿ ನೀಡುವಳು
ಸಂತೃಪ್ತ ನಿರ್ವಹಣೆಯ ಬದುಕುವಳು
ಎಲ್ಲರೊಳಗೊಂದಾಗು ಅನ್ನುವ ಕಂಗಳು
ನಕ್ಕರೆ ಅದೇ ಸ್ವರ್ಗ ಅನ್ನೋ ಮನಸಿನವಳು

ಮರೆತು ಮುನ್ನೆಡುವುದು ಸುಖದ ಜೀವನ
ಇರದುದಕೆ ಹೊಡೆದಾಡುವುದೇ ಮರಣ
ಕೂಡಿ ಬಾಳುವ ಹೊಂದಾಣಿಕೆಯೇ ಜನನ 
ಸದ್ಗುಣ ಆರೋಗ್ಯ ಜ್ಞಾನವೆ ಬದುಕುವ ಸಾಧನ.

ಕಲಿತು ಕಲಿಸುವ ನಕ್ಕು ನಲಿಯುವ 
ಮಕ್ಕಳಲ್ಲಿ ಮಕ್ಕಳಾಗಿ ಸದೃಢರಾಗಿ ನಿಲ್ಲುವ 
ನಿಮ್ಮ ಜೀವನ ಪಯಣ ಎಲ್ಲರಿಗೂ ಮಾದರಿ
 ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 
ಗಿರಿಜಾಅತ್ತೆಮ್ಮ 

ಆನಂದ ಕವಿ 



 - Made using Quotes Creator App, Post Maker App
0 likes 0 comments
anandakavi
Quote by anandakavi - ಶಾರದಾ

ದಿಟ್ಟತನದ ಚಕೋರಿ ಈ ನಾರಿ
ಬುದ್ಧಿವಂತೆ ವಿದ್ಯಾವಂತೆ ಸಿರಿ
ಅಚ್ಚುಕಟ್ಟು ಜೀವನಕೆ ಮಾದರಿ
ಮಾತು ಮಾತಿಗೂ ಶ್ರೀ ಗೌರಿ

ಒಡಹುಟ್ಟಿದವರ ಹಿತವೇ ಕನಸು
ಅಪ್ಪ ಅಮ್ಮನ ಪ್ರೀತಿಸುವ ಮನಸು
ಕೊಟ್ಟ ಮನೆ ಪ್ರೀತಿಯಲಿ ಬಂಧಿಸಿ
ಗುರು ಹಿರಿಯರ ಬಂಧುಗಳ ಗೌರವಿಸಿ

ಬಗೆ ಬಗೆಯ ಮೃಷ್ಟಾನ್ನ ಬಡಿಸುವಳು
ಅಮೃತ ಹಸ್ತದಿ ಮಕ್ಕಳ ಹರಸುವಳು
ಕುಟುಂಬವೇ ಅವಳ ಸರ್ವಸ್ವ ಅನ್ನುವಳು
ಎಲ್ಲರನ್ನೂ ಪ್ರೀತಿಸುವ ಮನಸಿನವಳು

ದಾನಮ್ಮನ ಅತ್ಯುತ್ತಮ ಪಾತ್ರ ಮಾಡಿ
ಆಯ್ದಕ್ಕಿ ಲಕ್ಕಮ್ಮ ಹೇಮರಡ್ಡಿ ಮಲ್ಲಮ್ಮ
ಅಭಿನಯ ಮಾಡಿ ಜನ ಮೆಚ್ಚುಗೆ ಪಡೆದಳು
ಸಾಮಾಜದ ಉತ್ತಮ ಸೇವೆ ಅವಳ ಲಕ್ಷ್ಯ.

ವಿವೇಕತನದೀ ವರುಣ ವೃಷ್ಟಿ ಸಂಗಮೇಶನ
ಕಾರುಣ್ಯ ಪಡೆದು ಹೆಮ್ಮೆಯ ಸರಳ ಸುಂದರ 
ಬದುಕೇ ಶಾರದಾ..
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 
ನಲ್ಮೆಯ ಪ್ರೀತಿಯ ಗೆಳತಿ ಅಕ್ಕ ಹಿತೈಷಿ ಸಖೀ...
ಶಾರದಾ....


ಆನಂದಕವಿ


 - Made using Quotes Creator App, Post Maker App
0 likes 0 comments
anandakavi
Quote by anandakavi - 
*ಭೂದೇವಿ* 
ಹಸಿರು ವನದ ಮೈಸಿರಿಯ ಭೂದೇವಿ ಇವಳು 
ಉಸಿರು ಕೊಡುವ ವನಸಿರಿ ಇವಳು //ಸಿರಿದೇವಿ 
ಐಸಿರಿಯ ಹೊತ್ತು ನಳನಳಿಸುತ್ತಿಹಳು 

✍️ಆನಂದಕವಿ - Made using Quotes Creator App, Post Maker App
0 likes 0 comments
anandakavi
Quote by anandakavi - ಕಾಫೀ

ಚಿಕ್ಕಮಗಳೂರಿನ ತೊಪ್ಪಲಿನಲ್ಲಿ ಕಾನನ
ಬಿಸಿಲು ಬೀಳದ ಎತ್ತರ ಮರಗಳ ವನ
ಹಸಿರು ಎಲೆಗಳ ಬಿಳಿಹೂಗಳ ಆಗಮನ
ಕಾಫೀ ಬೀಜಗಳಾಗಿ ಸೆಳೆವುದು ಗಮನ

ಅಲ್ಲೇ ಬಿಡುವ ಮೆಣಸು ಏಲಕ್ಕಿಯ ಘಮ
ಮರವೇರಿ ನೋಡುವುದು ಸೂರ್ಯನ ಕಿರಣ
ಬೆಟ್ಟ ಗುಡ್ಡಗಳ ಹಸಿರಿನ ತಂಪು ವಾತಾವರಣ
ಹಿತವಾದ ಬಿಸಿ ಬಿಸಿ ಕಾಫೀ ಬಯಸುವ ಮನ

ಅಡಿಕೆ ತೆಂಗು ಎಲೆ ಬೀಸುವ ತಂಗಾಳಿ
ಕಿತ್ತಳೆಗಳ ಸಿಹಿ ರಸ ಅಡಗಿಹುದು ಹಣ್ಣಲ್ಲಿ 
ಇಳಿಜಾರು ಗುಡ್ಡ ಪ್ರದೇಶ ಕಾಫಿ ಹಣ್ಣು ಗಿಡದಲ್ಲಿ
ಆರಿಸಿ ತರುವರು ಬೀಜಗಳ ಅಲೆದಾಡಿ ತೋಟದಲ್ಲಿ

ತಂದ ಬಾಬಾಬುಡನ್ ಯಮೆನನಿಂದ ಏಳು ಬೀಜಗಳ 
ಬೆಳೆದ ಕಾಫೀ ಗಿಡಗಳ ಕೊಡಗು ಪ್ರದೇಶದಲಿ 
ಬ್ರಿಟಿಷರು ಕೊಂಡರು ಕಾಫಿ ಉದ್ಯಮ ಆ ಕಾಲದಲಿ
ಅತ್ಯುತ್ತಮ ಅರೇಬಿಕ್ ರೊಬಸ್ಟ ತಳಿಗಳಲ್ಲಿ 

ಕೆಂಮ್ಮಣ್ಣಿನ ನಾಡಿನಿಂದ ನಿಮ್ಮ ಕಪ್ಪಿಗೆ ಬರುವ ಕಾಫಿ 
ಸ್ವಾದಿಷ್ಟ ರುಚಿಕರ ಕುಡಿದವರು ಸಮ್ಮೋಹಿತ 
ನಮ್ಮ ಕನ್ನಡ ನಾಡಿನ ಹೆಮ್ಮೆಯ ಬೆಳೆ ಕಾಫಿತೋಟ
ಎಲ್ಲರ ಅಚ್ಚು ಮೆಚ್ಚುಗೆ ಪಡೆದ ಚಿಕ್ಕಮಗಳೂರಿನ ಕಾಫೀ
ಬೆಳಗಾದರೆ ಮನೆ ಮನೆಯಲ್ಲೂ ಕಾಫೀ ಅಚ್ಚುಮೆಚ್ಚು.



ಆನಂದಕವಿ 

 



 - Made using Quotes Creator App, Post Maker App
0 likes 0 comments
anandakavi
Quote by anandakavi - ಕಾಫೀ

ಚಿಕ್ಕಮಗಳೂರಿನ ತೊಪ್ಪಲಿನಲ್ಲಿ ಕಾನನ
ಬಿಸಿಲು ಬೀಳದ ಎತ್ತರ ಮರಗಳ ವನ
ಹಸಿರು ಎಲೆಗಳ ಬಿಳಿಹೂಗಳ ಆಗಮನ
ಕಾಫೀ ಬೀಜಗಳಾಗಿ ಸೆಳೆವುದು ಗಮನ

ಅಲ್ಲೇ ಬಿಡುವ ಮೆಣಸು ಏಲಕ್ಕಿಯ ಘಮ
ಮರವೇರಿ ನೋಡುವುದು ಸೂರ್ಯನ ಕಿರಣ
ಬೆಟ್ಟ ಗುಡ್ಡಗಳ ಹಸಿರಿನ ತಂಪು ವಾತಾವರಣ
ಹಿತವಾದ ಬಿಸಿ ಬಿಸಿ ಕಾಫೀ ಬಯಸುವ ಮನ

ಅಡಿಕೆ ತೆಂಗು ಎಲೆ ಬೀಸುವ ತಂಗಾಳಿ
ಕಿತ್ತಳೆಗಳ ಸಿಹಿ ರಸ ಅಡಗಿಹುದು ಹಣ್ಣಲ್ಲಿ 
ಇಳಿಜಾರು ಗುಡ್ಡ ಪ್ರದೇಶ ಕಾಫಿ ಹಣ್ಣು ಗಿಡದಲ್ಲಿ
ಆರಿಸಿ ತರುವರು ಬೀಜಗಳ ಅಲೆದಾಡಿ ತೋಟದಲ್ಲಿ

ತಂದ ಬಾಬಾ ಬುಡನ್ ಏಳು ಬೀಜಗಳ 
ಬೆಳೆದ ಕಾಫೀ ಗಿಡಗಳ ಕೊಡಗು ಪ್ರದೇಶದಲಿ 
ಬ್ರಿಟಿಷರು ಕೊಂಡರು ಕಾಫಿ ಉದ್ಯಮ ಆ ಕಾಲದಲಿ
ಅತ್ಯುತ್ತಮ ಅರೇಬಿಕ್ ರೊಬಸ್ಟ ತಳಿಗಳಲ್ಲಿ 

ಕೆಂಮ್ಮಣ್ಣಿನ ನಾಡಿನಿಂದ ನಿಮ್ಮ ಕಪ್ಪಿಗೆ ಬರುವ ಕಾಫಿ 
ಸ್ವಾದಿಷ್ಟ ರುಚಿಕರ ಕುಡಿದವರು ಸಮ್ಮೋಹಿತ 
ನಮ್ಮ ಕನ್ನಡ ನಾಡಿನ ಹೆಮ್ಮೆಯ ಬೆಳೆ ಕಾಫಿತೋಟ
ಎಲ್ಲರ ಅಚ್ಚು ಮೆಚ್ಚುಗೆ ಪಡೆದ ಚಿಕ್ಕಮಗಳೂರಿನ ಕಾಫೀ
ಬೆಳಗಾದರೆ ಮನೆ ಮನೆಯಲ್ಲೂ ಕಾಫೀ ಅಚ್ಚುಮೆಚ್ಚು.



ಆನಂದಕವಿ 

 



 - Made using Quotes Creator App, Post Maker App
0 likes 0 comments
anandakavi
Quote by anandakavi - ಬೆಸುಗೆ

ಭೂಮಿ ಮತ್ತು ಅನಂತ ಆಕಾಶ
ಸೂರ್ಯ ನಿನ್ನ ನಿತ್ಯ ಪ್ರಕಾಶ
ಮೋಡ ಸುರಿದು ತಣಿದ ಭೂಮಿ
ಪ್ರಕೃತಿಯ ಮಿಲನದ ಮಳೆಯ ಬೆಸುಗೆ

ಕಾಣುವ ಸಂತರು ಕಾಣದ ದೇವರು
ಮನದಲಿ ಪೂಜಿಸಿ ನಂಬಿಕೆ ಇಡುವರು
ಅದ್ಯಾವ ಅಘಾದ ಅಮೋಘ ಶಕ್ತಿಯಿದು
ಆತ್ಮ ಪರಮಾತ್ಮನ ಬೆಸೆದ ಈ ಬೆಸುಗೆ

ತಂದೆ ತಾಯಿ ಹುಟ್ಟಿಸುವ ಬಂಧ
ಬೆಳೆಯುತ ಕಲಿತ ಹಲವು ಅನುಬಂಧ
ಭಾವ ಆತ್ಮದಲ್ಲಿ ಬೆಸೆದ ಸಂಬಂಧ
ಬೇಸದನೆ ದೇವ ಜನ್ಮ ಜೀವಕೆ ಬೆಸುಗೆ

ವಿಭಿನ್ನ ಜೀವ ಜಲ ರಾಶಿ ಸಂಕುಲ
ಆಧ್ಯಾತ್ಮ ಚೇತನ ಅನಂತ ಮುಗಿಲು
ಬೆಸೆದ ಸಂಬಂಧಗಳ ಹುಟ್ಟಿಸಿ ಮನುಕುಲ
ಪ್ರಕೃತಿ ಮಾನವ ಜ್ಞಾನದ ದಿವ್ಯ ಬೆಸುಗೆಯ ಬಯಲು.


✍️ ಆನಂದ ಕವಿ - Made using Quotes Creator App, Post Maker App
0 likes 0 comments
anandakavi
Quote by anandakavi - *ಚಂದ್ರ ಚಕೋರಿ*

ಮನ ಮೋಹಿಸೋ ಚಂದ್ರಚಕೋರಿ
ದಿಟ್ಟಿಸಿ ನೋಡೋ ನಿನ್ನ ವೈಖರಿ
ಚೆಲುವೆಯ ಹವ್ಯಾಸದ ಚಿತ್ರಾಕಾರೀ 
ಕಪ್ಪು ಕಾಡಿಗೆ ಅರಳಿದ ನಯನ ಸಿರಿ

ಚಂದದಿ ಹೆಣೆದ ಕೇಶ ವಿನ್ಯಾಸ
ಮಲ್ಲಿಗೆ ಹೂವಿನ ಘಮದ ವಾಸ
ಪುಟ್ಟ ಬೊಟ್ಟು ಮಾಡಿ ಇವಳ ಖಾಸ
ಬಣ್ಣದ ಮಿಶ್ರಣ ಕುಂಚದ ಪ್ರಯಾಸ

ಅಭಿಮಾನದಿ ತೇಲಿದೆ ಮಂದಹಾಸ 
ಕೊರಳಲಿ ಮುತ್ತಿನ ಹಾರದ ಸೊಗಸ
ಅರಳಿವೆ ಕಂಗಳು ಬಣ್ಣಗಳ ಸರಸ
ಕೇಳಿದೆ ಮನ ಇವನೇ ನನ್ನ ಅರಸ?

ಮೌನದಲಿ ಹುಡುಕಿದೆ ಸೂಕ್ಷ್ಮ ಸ್ಪರ್ಶ 
ಬಣ್ಣಗಳ ಲೋಕ ತಂದಿದೆ ಹರ್ಷ
ಕಪ್ಪು ಬಿಳುಪಿನ ಅನುಬಂಧ ದರ್ಶ
ಮೋಡಿ ಮಾಡಿದ ಇವಳು ಆಕರ್ಷ

✍️ಆನಂದಕವಿ - Made using Quotes Creator App, Post Maker App
1 likes 0 comments

Explore more quotes

anandakavi
Quote by anandakavi - ರುಬಾಯಿ

           *ಮುಂಗಾರು* 
ಭೂಮಿ ಆಕಾಶದ ಸುಮಧುರ ಮಿಲನ
ಪ್ರಕೃತಿ ವಿಸ್ಮಯ ಋತುಗಳ ಪಯಣ
ಮೊಳಕೆಯೊಡೆದು ಬೀರೂರುವ ಮುಂಗಾರು 
ಹಸಿರಾಗಿ ಉಸಿರು ಕೊಡುವ ರಿಂಗಣ.

✍️ಆನಂದಕವಿ - Made using Quotes Creator App, Post Maker App
1 likes 0 comments
anandakavi
Quote by anandakavi - ಗುರು ಎಂದರೆ ಯಾರು?
ಗುರಿ ತೋರಿಸುವಾತ ಗುರು.ತಾಯಿ ಮೊದಲ ಗುರು ವಾದರೆ ತಂದೆ ಜಗತ್ತನ್ನು  ಜೀವನದ ಸತ್ಯದ ಅನುಭವ ಕೊಟ್ಟು ಬದುಕಲು ಹೇಳಿ ಕೊಡುವ ಗುರು.ಅಕ್ಷರಗಳ ಕಲಿಸಿ ವಿದ್ಯೆ ಬುದ್ಧಿ ಜ್ಞಾನದ ಮೂಲಕ ಉತ್ಕೃಷ್ಟ ಮಟ್ಟ ಮುಟ್ಟಲು ದಾರಿ ತೋರುವಾತ ಗುರು. ನಿಸ್ವಾರ್ಥ ಭಾವದ ಆಧ್ಯಾತ್ಮದ ಅರಿವು ಮೂಡಿಸುವ ಗುರು.ಒಳ್ಳೆಯ ದಾರಿ ತೋರುವಾತ ಗುರು.

✍️ ಆನಂದಕವಿ - Made using Quotes Creator App, Post Maker App
1 likes 0 comments
anandakavi
Quote by anandakavi - Unfold the untold stories with the nature even plants trees listen and guide you if you listen silently . Just say with your eyes express with heart.cry ,laugh talk touch feel the nature. Feel the essence of the air you breathe.Life Love It Live It.

Fuel Life 💕



Anandkavi - Made using Quotes Creator App, Post Maker App
4 likes 0 comments
anandakavi
Quote by anandakavi - 
ಕೇಳಿದರೂ ಕೇಳದಂತೆ
ಕಣ್ಣಿದ್ದರೂ ಕಾಣದಂತೆ
ನುಡಿದರೂ ನೋವಾಗದಂತೆ
ಇವರೇ ನಮಗೆ ಹಿತವರು
ಅವರೇ ನಮ್ಮವರು


ಆನಂದ ಕವಿ  - Made using Quotes Creator App, Post Maker App
1 likes 0 comments
anandakavi
Quote by anandakavi - Some feel lying will keep others
and themselves happy. Nither problem arise 
nor the conflict ,all will go well. Remember ,
It never keep you happy. as it may come out any time..
be true to self .once you learn
 this discipline..life will be peaceful and happy.
Life Love it Live it 

Fuel Life 💞





anandakavi  - Made using Quotes Creator App, Post Maker App
1 likes 0 comments
anandakavi
Quote by anandakavi - *ಅಂಕುರ*

ಅಂಕುರಿಸಿತು ಜೀವವೊಂದು
ಕಣ್ಣಲೆನೋ ಹೊಸತನವೀಂದು
ಪುಟಿದು ಉಕ್ಕುತ್ತಿದೆ ಮನವೀಂದು 
ಬಯಕೆ ನೂರು ಬಯಸಿದೆಯಿಂದು
ಕೇಳಿದೆ ಹೊಸ ಜೋಗುಳವೊಂದು
ಪ್ರಕೃತಿ ವಿಸ್ಮಯಕೆ ಶರಣಾದೇನಿಂದು 

✍️ ಆನಂದಕವಿ - Made using Quotes Creator App, Post Maker App
0 likes 0 comments
anandakavi
Quote by anandakavi - *ಸೀಮಂತ


ಬವಿಕೆ ಬಯಕೆ ಬಸುರಿಯ ನವಮಾಸ ಸಂಬ್ರಮ
ಹೆಣ್ತನದ ಸವಿಗನಸಿನ ಸೀಮಂತದ ಸುದಿನ
ಚೊಚ್ಚಲು ಅನುಭವದ ಹೊಸ ಅನುರಣ 
ತಾಯಿಯಾಗುವ ಹೆಣ್ಣಿನ ಬಾಳಿನ ನವ ಅಂಕಣ

ತವರು ಮನೆಯ ಸಡಗರ ಆನಂದದ ಅಭಿಮಾನ
ಆರೈಕೆ ಹರಿಕೆಗಳ ಒಡಹುಟ್ಟಿದವರ ಸಂಕ್ರಮಣ
ಉತ್ಸಾಹ ಚೈತನ್ಯದ ಪ್ರೀತಿಯ ಸಿಹಿ ವಾತಾವರಣ
ಬಂಧು ಬಳಗದ ತಿನಿಸಿ ಉಣಿಸೋ ಕಾರ್ಯಕ್ರಮ

ಅಮ್ಮ ಅಪ್ಪನ ಅಜ್ಜ ಅಜ್ಜೀ ಅನ್ನಿಸಿಕೊಳ್ಳೋ ಭಾವ
ಪೂರ್ವಜರು ಹುಟ್ಟಿ ಬರುವರು ಅನ್ನೋ ಮನೋಭಾವ
ಹೀಗೆ ಹಾಗೇ ಮಾಡು ಅನ್ನೋ ಮಾತುಗಳ ವೈಭವ
ಎಲ್ಲರೂ ಅವರವರ ಹೇಳೋ ಕಥೆ ವೃತ್ತಾಂತ ಅನುಭಾವ

ನಿದ್ದೆ ಇಲ್ಲದೆ ಇಷ್ಟ ಕಷ್ಟಗಳ ಆಲಿಸಿ ಮುದ್ಧಿಸೋ ಪತಿ
ಕೈಹಿಡಿದು ನಾನು ಜೊತೆ ಇರುವೆನು ಅನ್ನೋ ಸಹಕಾರ
ಬಾಳಿನಲ್ಲಿ ಹೊಸದೊಂದು ಜೀವ ಹುಟ್ಟುವ ಪ್ರತಿರೂಪ
ಗಂಡನಾಗಿ ತಂದೆಯಾಗೋ ಹೆಮ್ಮೆಯ ಅಪ್ಪನ ಹೃದಯ.

ಹೆಣ್ಣೋ ಗಂಡೋ ಎನ್ನುವ ತಾಯಿ ಹೃದಯದ ಕಳವಳ
ಒಳಗೆ ಆಗುವ ವಿಸ್ಮಯ ಹೃದಯ ಬಡಿತದ ಬೆಳವಣಿಗೆ
ಕೈಮುಗಿದು ಸುಕೃತಿ  ಬೇಡಿಕೊಳ್ಳೋ ತಾಯಿ ಚಡಪಡಿಕೆ
ಆ ದೇವರು ಹೆಣ್ಣಿಗೆ ಕೊಟ್ಟ ತಾಯ್ತನದ ಅದ್ಭುತ ವರ...

ಮನತುಂಬಿ ಹರೆಸುವೆವು ನಿನ್ನ ಒಡಹುಟ್ಟಿದವರಿಂದು
ಹುಟ್ಟಿ ಬರಲಿ ಆರೋಗ್ಯದ ನಗುವ ಮುದ್ದು ಮಗುವೊಂದು
ನಗುವ ತುಂಬಿ ಹರಿಯಲಿ ಹೊಳೆಯಾಗಿ ಮನೆಯಲಿಂದು 
ಹುಟ್ಟಿ ಬರಲಿ ಭಾಗ್ಯದ ಗಣಿ ಚೈತನ್ಯದ ನಿಧಿ ಮನೆಗಿಂದು 


ಆನಂದ ಕವಿ 



 - Made using Quotes Creator App, Post Maker App
0 likes 0 comments
anandakavi
Quote by anandakavi - ತ್ರಿದೇವಿಯರು

ಚೆಲುವೆಯರು ಈ ಚಂಚಲ ಕನ್ಯೆಯರು
ಹಸಿರು ನೀಲಿ ಕೆಂಪು ರೇಷ್ಮೆ ಸೀರೆ ಉಟ್ಟರು 
ಹಣೆಯಲಿ ಕುಂಕುಮ ಕೈಲಿ ಬಳೆ ತೊಟ್ಟುರು 
ಸಖಿಯರು ಮನ ಮೋಹಿಸೋ ತ್ರೀದೇವಿಯರು 

ಮದುವೆ ವಯಸ್ಸು ವರೆಸುವರು ಯಾರನ್ನ
ಬಂಗಾರದ ಮೈಬಣ್ಣ ನೀಳ ,ನಡು ಸಣ್ಣ
ನಗುವಿನ ಕಡಲಲಿ ತೇಲಿ ಮುಗುಳ್ನಗೆ ಕಣ್ಣ
ಪೋಸ್ಟ್ ಚಿತ್ರಗಳ ಹಿಡಿದು ನೋಡುತಿಹರಣ್ಣ 

ಅಮ್ಮ ಅಪ್ಪನ ಆಸರೆ ಗಂಡನಿಗೆ ಸಹಕಾರದ ಹೆಗಲು
ಹೊಸ ಜೀವನದ ಹೊಸ ಕಲ್ಪನೆಯ ಮುಗಿಲು 
ಚೆನ್ನಮ್ಮನ ಕೆಚ್ಚೆದೆಯ ದಿವ್ಯತೆಯ ಅನಂತ ಬಯಲು
ಸಂಜಾತೆಯರು ಸಮಬಾಳು ಸಮಾನತೆಯ ಸಮಪಾಲು

ಸ್ವಾಭಿಮಾನದ ಬದುಕು ಸ್ವತಂತ್ರರು ಇವರು
ಜ್ಞಾನದ ಗಣಿಗಳು ಚೈತನ್ಯದ ಹುರುಪಿನವರು
ಬೇಧ ಭಾವ ಅರಿಯದ ನವ ಯುವತಿಯರು
ನವಯುಗದ ಧೀಮಂತ ವಿದ್ಯಾವಂತ ನಾರಿಯರು

✍️ ಆನಂದ ಕವಿ - Made using Quotes Creator App, Post Maker App
4 likes 1 comments
anandakavi
Quote by anandakavi - They say marriages are made in heaven.two unknown people start making adjustments willing or unwilling.bond that keep them together is just love. To do anything for each other.if not it's a punishment.compromise and adjustment is the name of marriage. Be honest trust eachother love will follow you. Life Love it Live it.


Fuel Life 💕



anandakavi - Made using Quotes Creator App, Post Maker App
0 likes 0 comments
anandakavi
Quote by anandakavi - *ಸಂತಸದ ಟ್ರಿಪ್-     ಭಾಗ- 5

ಅಂತಲೇ ಕೈ ಬೀಸಿ ಮುಖಕ್ಕೆ ಹೊಡದೆ ಬಿಟ್ಟಳು..ಬೀಬಿ ಇನ್ಕೆ ಸಾಮ್ನೇ ಮಾರಾ ಅಂತ ಗನ್ ಟ್ರಿಗರ್ ಒತ್ತಿಯೇ ಬಿಟ್ಟ. ಭೂಮಿಯೇ ಕಂಪಿಸಿದ ಅನುಭವವಾಯ್ತು ರಕ್ತ ಗುಡಿಸಿಲಲಿ ಚಿಮ್ಮಿ ಅವಳು ಅಲ್ಲಿಯೇ ಬಿದ್ದಳು. ನಿಶಬ್ದ ಮೌನ ಹುಡುಗ ಭಯದಲ್ಲೇ ಅವಳ ಬಿಟ್ಟು ಓಡಿದ..ಒಮ್ಮೆಲೇ ತಿಳಿಯದ ಎಲ್ಲರೂ ಎದ್ದು ಹೇಗಾದರು ಇಲ್ಲಿಂದ ತಪ್ಪಿಸಿ ಕೊಳ್ಳಲು ಇದಕ್ಕಿಂತ ಸಮಯ ಇಲ್ಲ ಅಂತ ಇದ್ದ ಫೋನ್ ತೆಗೆದು ಗಂಡನಿಗೆ ಫೋನ್ ಮಾಡಿ ಲೋಕೇಷನ್ ಕಳಿಸಿದಳು.ಹೆದರಬೇಡಿ ಈಗಾಗಲೇ ನಿಮ್ಮನು ಹುಡುಕಲು ಆರ್ಮಿ ಮತ್ತು ಪೊಲೀಸ್ ಹುಡುಕುತಿರುವರು ..ಅಲ್ಲಿಯೇ ಇರಿ ನಾವು ಆದಷ್ಟು ಬೇಗ ಬರುತ್ತೇವೆ..ಅಷ್ಟರಲ್ಲೇ ಮತ್ತೆ ಜೀಪಿನಲ್ಲಿ ಗನ್ ಹಿಡಿದ ಯುವಕರು ಬಾಗಿಲ ಮುಂದೆ ಮಾತನಾಡುತ್ತಾ ಕುಳಿತರು...


ನಾಳೆ ಓದಿ 

ಆನಂದ ಕವಿ  - Made using Quotes Creator App, Post Maker App
0 likes 0 comments

Explore more quotes

anandakavi
Quote by anandakavi - ಸಂತಸದ ಟ್ರಿಪ್ -ಭಾಗ 4


ಓಡಿ ಹೋಗಲು ಸಾಧ್ಯವಿಲ್ಲ ಇಲ್ಲಿ ದೂರ ದೂರಕ್ಕೂ ಮನೆಗಳಿಲ್ಲ ಜನರ ವಸತಿ ಪ್ರದೇಶವು ಅಲ್ಲ .ಕೂಗಿ ಕರೆದರು ಕೇಳುವರಾರು ಇಲ್ಲ.ಮೂರು ಘಂಟೆ ಮೂರು ವರ್ಷದಂತೆ ಇತ್ತು.ಆದೆ ಹೊದಿಕೆ ಹಲ್ಲು ಕೂಡ ತೊಳೆಯದೆ ಉಸಿರು ಬಿಡದೆ ಒಬ್ಬರನೊಬ್ಬರು ಮೂಕ ವಿಸ್ಮಿತವಾಗಿ ಕಣ್ಣಂಚಿನಲ್ಲಿ ಕಣ್ಣೀರು ಮನೆಯವರ ನೆನಪು ಬೇಡ ಬೇಡ ಅಂದರೂ ಮನಸು ನೋಯಿಸಿ ಬಂದ ನಮ್ಮ ಹೃದಯ ನಮ್ಮ ಕಿವಿಗೆ ಕೇಳುವಂತೆ ಬಡಿದಿತ್ತು. ಬಾಗಿಲು ಬಡೆವ ಶಬ್ದ . ಖಾನಾ ದೇನ ಬೀಬಿ..ಅಂತ ಬಂದೂಕು ಹಿಡಿದ ಇಪ್ಪತ್ತು ವರ್ಷದ ಮೀಸೆಯೂ ಬಾರದ ಹುಡುಗ..ಮನೆಯ ಹೆಂಗಸು ಬಂದು 
ಬೆಟಾ ಇನ್ಕೋ ಚೂಡದೋ ಮಿಲ್ಟ್ರಿ ವಲೋ ಕೋ ಪಾತಾ ಛಲ ತೋ ಸಬ್ ಮರ್ ಜಯೇಂಗೆ .ಅಂದಾಗ ಅವನು ರಭಸದಲ್ಲಿ ಅವಳ ಕತ್ತಿಗೆ ಗನ್ ಹಿಡಿದ.. ಆಲ್ಲಾ ತು ಮುಜೆ ಮಾರೆಗಾ....


ನಾಳೆ ಓದಿ 

ಆನಂದ ಕವಿ 


 - Made using Quotes Creator App, Post Maker App
0 likes 0 comments
anandakavi
Quote by anandakavi - ಸಂತಸದ ಟ್ರಿಪ್ 
ಭಾಗ 3


ಹಾಕಿದ ಬಟ್ಟೆ ಸ್ವೆಟರ್ ಟೋಪಿ ಷಾಲು ಬೆಚ್ಚಗೇನೋ ಇಟ್ಟಿತ್ತು ಭಯವೂ ಹೆಪ್ಪುಗಟ್ಟಿತ್ತು. ಒಂದು ಪೌಂಡ್ ಬ್ರೆಡ್ ಚಹಾ ತಂದು ಕೊಟ್ಟಳು ಆ ಹೆಣ್ಣು ಮಗಳು.ಹಸಿದ ಹೊಟ್ಟೆಗೆ ಬೇಡವಾದರು ಆರು ಜನ ಬಿಸಿ ಬಿಸಿ ಕುಡಿದೆವು, ಅಲ್ಲೇ ಒಲೆ ಉರಿಯ ಮೇಲೆ ರೋಟಿ ಹಾಗು ದಾಲ್ ಕುದಿಯಲು ಇಟ್ಟ ನಮ್ಮನ್ನೆಲ್ಲ ಹಿಮದ ಕಣಿವೆಯಲ್ಲಿ ಬೆಚ್ಚನೆಯ ಮನೆ ಆಸರೆ ನೀಡಿತ್ತು. ಕಳುಹಿಸಿದ ಮೆಸೇಜ್ ಮುಟ್ಟಿದ್ದರೆ ಏನಾದರೂ ಆಗಬಹುದು ಇಲ್ಲದಿದ್ದರೆ ನಮ್ಮೆಲ್ಲರ ಗತಿ.
ಮಾತನಾಡುವಂತಿಲ್ಲ ಒಂದೇ ಕೋಣೆಯ ಗುಡಿಸಲು.ಫೋನ್ ಇದೆ ಅಂತ ಗೊತ್ತಾದ್ರೆ ಆದು ಕಸಿದು ಬಿಡುವರೇನೋ ಅನ್ನೋ ಭಯ.ದೂರದೂರದಲ್ಲೂ ನಿಶಬ್ದ ಹಿಮದ ಗುಡ್ಡೆಗಳು ಪುಟ್ಟ ಕಿಟಕಿ ಇಂದ ಕಾಣುವ ಈ ದೃಶ್ಯ .ಯಾರಾದರೂ ನಮಗೆ ಸಹಾಯ ಮಾಡುವರೆ ಅನ್ನೋ ಆಶಯ....


ಆನಂದ ಕವಿ  - Made using Quotes Creator App, Post Maker App
2 likes 0 comments
anandakavi
Quote by anandakavi - ಭಾಗ 3


ಹಾಕಿದ ಬಟ್ಟೆ ಸ್ವೆಟರ್ ಟೋಪಿ ಷಾಲು ಬೆಚ್ಚಗೇನೋ ಇಟ್ಟಿತ್ತು ಭಯವೂ ಹೆಪ್ಪುಗಟ್ಟಿತ್ತು. ಒಂದು ಪೌಂಡ್ ಬ್ರೆಡ್ ಚಹಾ ತಂದು ಕೊಟ್ಟಳು ಆ ಹೆಣ್ಣು ಮಗಳು.ಹಸಿದ ಹೊಟ್ಟೆಗೆ ಬೇಡವಾದರು ಆರು ಜನ ಬಿಸಿ ಬಿಸಿ ಕುಡಿದೆವು, ಅಲ್ಲೇ ಒಲೆ ಉರಿಯ ಮೇಲೆ ರೋಟಿ ಹಾಗು ದಾಲ್ ಕುದಿಯಲು ಇಟ್ಟ ನಮ್ಮನ್ನೆಲ್ಲ ಹಿಮದ ಕಣಿವೆಯಲ್ಲಿ ಬೆಚ್ಚನೆಯ ಮನೆ ಆಸರೆ ನೀಡಿತ್ತು. ಕಳುಹಿಸಿದ ಮೆಸೇಜ್ ಮುಟ್ಟಿದ್ದರೆ ಏನಾದರೂ ಆಗಬಹುದು ಇಲ್ಲದಿದ್ದರೆ ನಮ್ಮೆಲ್ಲರ ಗತಿ.

ಮಾತನಾಡುವಂತಿಲ್ಲ ಒಂದೇ ಕೋಣೆಯ ಗುಡಿಸಲು.ಫೋನ್ ಇದೆ ಅಂತ ಗೊತ್ತಾದ್ರೆ ಆದು ಕಸಿದು ಬಿಡುವರೇನೋ ಅನ್ನೋ ಭಯ.ದೂರದೂರದಲ್ಲೂ ನಿಶಬ್ದ ಹಿಮದ ಗುಡ್ಡೆಗಳು ಪುಟ್ಟ ಕಿಟಕಿ ಇಂದ ಕಾಣುವ ಈ ದೃಶ್ಯ .ಯಾರಾದರೂ ನಮಗೆ ಸಹಾಯ ಮಾಡುವರೆ ಅನ್ನೋ ಆಶಯ....ಮುಂದೆ...ನಾಳೆ ಓದಿ 

ಆನಂದ ಕವಿ 


  - Made using Quotes Creator App, Post Maker App
0 likes 0 comments
anandakavi
Quote by anandakavi - ಭಾಗ 2

ಹಸಿವು ಬಾಯಾರಿಕೆ ದೇಹದಲ್ಲಿ ತಲ್ಲಣ ಸಂತಸದ ಯಾತ್ರೆ .ಒಬ್ಬಳ ಜೇಬಿನಲ್ಲಿ ಮೊಬೈಲ್ ಇತ್ತು.ಮೆತ್ತಗೆ ಅದನ್ನು ತೆಗೆದು ಮನೆಯವರಿಗೆ ಮೆಸೇಜ್ ಮಾಡಿದಳು .ಕುರಿಗಳಂತೆ ಕುಳಿತ ಇವರು..ನೆಟ್ವರ್ಕ್ ಇಲ್ಲ .ಇಲ್ಲಿ ನಮ್ಮನು ಯಾರು ಕಾಪಡುವರಿಲ್ಲ ಅನ್ನೋ ಸತ್ಯ ಮತ್ತಷ್ಟು ಗಾಬರಿ ಹುಟ್ಟಿಸಿತು.

ಕಣ್ಣೀರು ಧಾರಾಕಾರವಾಗಿ ಹರಿಯ ತೊಡಗಿತು.ಗಾಡಿ ನಿಂತ ಶಬ್ದ .ಉತ್ರೂ ಉತ್ರೋ ಅಂತ ಪುಟ್ಟದೊಂದು ಗುಡಿಸಲು ಮುಂದೆ ನಿಂತ ಕಾಶ್ಮೀರಿ ಮೂಲದ ಹೆಣ್ಣು ಮಕ್ಕಳು. ಇನ್ಹೆ ಖಾನಾ ಪಾನಿ ದೆದೋ. ಹೆದರುತ್ತಾ ನಮ್ಮನ ಒಳಗೆ ಕರೆದೊಯ್ದರು .ಖವ ಖವ ಕೇಳಿದರು ಉಸಿರು ಬರುತ್ತಿಲ್ಲ .ಬಿಕ್ಕಿ ಬಿಕ್ಕಿ ನಿಲ್ಲದ ಆಳು. ಧೈರ್ಯ ಮಾಡಿ ಹಮೆಚೊಡೊ. ಚೊಡ್ಡೋ . ಅಲ್ಲೇ ಇದ್ದ ಹೊರಾಂಗಣ ತೋರಿಸಿ ಕೈ ಸನ್ನೆ ಮಾಡಿ ಟಾಯ್ಲೆಟ್ ತೋರಿಸಿದರು...ಒಬ್ಬೊಬ್ಬರೇ ಹಿಡಿದಿಟ್ಟ ಮೂತ್ರ ವಿಸರ್ಜನೆ ಮಾಡಿ ಬಂದೆವು.ಒಬ್ಬರನೊಬ್ಬರು ಯಾವುದೇ ಕಾರಣಕ್ಕೂ ಹೆದರದೆ ಕೂಡಿ ಇರಲು ಸನ್ನೆ ಮಾಡಿದರು..ನಮ್ಮನ್ನೆಲ್ಲಾ ಬಿಟ್ಟು ಜೀಪ್ ಹೊರಟೆ ಹೋಯಿತು.ಮುಂದೆ ಏನಾಗುವುದೋ..

ನಾಳೆ ಓದಿ...


ಆನಂದ ಕವಿ  - Made using Quotes Creator App, Post Maker App
0 likes 0 comments
anandakavi
Quote by anandakavi - *ಸಂತಸದ ಟ್ರಿಪ್*


ಅವಸರದಲ್ಲೇ ಗೆಳತಿಯರೆಲ್ಲಾ ಕೂಡಿ ಕಾಶ್ಮೀರ ಟ್ರಿಪ ಪ್ಲನ
ಮಾಡಿಯೇ ಬಿಟ್ರು.ದಿನವೂ ಬಂದಾಯ್ತು ಬಟ್ಟೆ ಬರೆಗಳ ಖರೀದಿಯೂ ಆಗಿತ್ತು.ಸಂಬ್ರಮ ಸಡಗರದಿಂದ ಗೆಳತಿಯರು ಮನೆಯ ನೆನಪೇ ಹಾರಿ ಹೋಗಿತ್ತು. ರಾತ್ರಿ ವೇಳೆ ಒಮ್ಮೆಲೇ ಗಲಾಟೆ ಗನ್ ಶಬ್ದ ನಮ್ಮನ್ನೆಲ್ಲ ಭಯ ಗೊಳಿಸಿತು.ಹೋಟೆಲ್ ಮಾಲಿಕ ಹಮರೀ ಮೆಹೇಮಾನ್ ಹೈ ಚೂಡ್ ದೋ, ಅನ್ನೋ ದ್ವನಿ ...ಅವನನ್ನು ಗನ್ ಹಿಡಿದು ಬಾಗಿಲು ತೆಗಿಸೀ ಬಿಟ್ಟರು.ನಾವು ನಡುಗಿ ನೀರಾದೆವು.ಭಯ ದುಃಖ ಮಕ್ಕಳು ಮನೆ ದೇವರು ಒಮ್ಮೆ ನೆನಪಾದವು ಬಾಯಿಯಲ್ಲಿ ಶಬ್ದ ಸತ್ತೇ ಹೋದವು. ಛಲೋ ಛಲೋ ಗಾಡಿ ಮೈ ಬೈಟೋ ಅಂತ ಕೈ ಜೋರಾಗಿ ಹಿಡಿದು ಪ್ರಾಣಿಗಳಂತೆ ನೂಕಿದರು . ಕತ್ತಲು ಚಳಿ ಒಬ್ಬರನೊಬ್ಬರು ಹಿಡಿದು ಕುಳಿತೆವು.ಬೆಳಗಿನ ಸೂರ್ಯಸುತ್ತಲು ಮಂಜು ಹಿಮದ ಗುಡ್ಡೆಗಳು ಎಲ್ಲಿ ಏನು ಮಾಡಬೇಕು ಆತಂಕ .ಇನ್ನೂ ಮುಂದೆ...


ಮುಂದುವರೆವುದು....ನಾಳೆ ಓದಿ

ಆನಂದ ಕವಿ  - Made using Quotes Creator App, Post Maker App
0 likes 0 comments
anandakavi
Quote by anandakavi - ಪ್ರೇಮಗಾನ

ಸಖೀ ಕೇಳೇ ಬರೆದೆ ನಿನಗೊಂದು ಪ್ರೇಮಗಾನ
ಕಾಡುತಿದೆ ಕುಳಿತಲ್ಲೇ ಸುಮ್ಮನೆ ಕಾಡಿಗೆ ನಯನ
ಕಿವಿಯಲ್ಲಿ ಗುನುಗಿದೆ ಪಿಸು ಮಾತಿನ ಸವಿಗಾನ
ದೂರದ ಊರಿಂದ ಬರೆಯುತಿರುವೆ ನಿನಗೆ ಕವನ

ಪೂರ್ಣಿಮೆಯ ಚಂದ್ರನ ಹಾಲಿನಂತ ಬೆಳದಿಂಗಳು 
ಕದ್ದು ನೋಡಿದಂತಿದೆ ತುಂಟ ನಿನ್ನ ಕಪ್ಪು ಕಂಗಳು
ರಾತ್ರೀರಾಣಿ ಹೂಗಳ ಹರಡಿದೆ ಪ್ರೀತಿಯ ಪರಿಮಳ
ಗೆಳತಿ ಬಾರೇ ಅನ್ನುತಿದೆ ಕಾದಿದೆ ಮನದ ಅಂಗಳ

ಮನಸು ಏಕೋ ಕೇಳದಿನ್ನು ಸನಿಹ ಬಯಸಿದೆ
ಎಲ್ಲಾ ಬಿಟ್ಟು ಓಡಿ ಬಂದು ಸೇರಲೆನೋ ಅನಿಸಿದೆ
ಬಯಕೆ ನೂರು ಹೇಳಲೇನು ಓಲವು ನನ್ನ ಕಾಡಿದೆ
ಭಾವನೆಯ ಕಡಲು ಹರಿದು ಹೃದಯ ನಿನ್ನ ಕರೆದಿದೆ 

ನೀ ಬರೆದ ಪ್ರೇಮ ಪತ್ರ ಮುತ್ತಿಟ್ಟು ಮತ್ತೆ  ಓದುವೆ
ಒಣಗಿದ ಗುಲಾಬಿ ನವಿಲುಗರಿ ಸ್ಪರ್ಶ ನಿನ್ನ ನೆನೆಸಿವೆ
ಮಧುರ ಪ್ರೇಮದ ಸಿಹಿ ಸವಿ ಗುಂಗಿನಲ್ಲಿ ಬದುಕಿರುವೆ
ಪ್ರೇಮಯಾನ ದಡ ಸೇರಲು ಕಾತುರನಾಗಿ ಕಾದಿರುವೆ.

✍️ ಅನಂದ ಕವಿ

 - Made using Quotes Creator App, Post Maker App
1 likes 0 comments
anandakavi
Quote by anandakavi - *ಜ್ಞಾನದ ದೇಗುಲ*

ಜ್ಞಾನದ ದೇಗುಲವಿದು 
ಬಸ್ಮ ಮಾಡಿ ನಳಂದಾ 
ಸುಟ್ಟರೂ ವಿಶ್ವ ವಿದ್ಯಾಲಯ
ಸುಡದು ಜ್ಞಾನದ ಕೋಶ 
ಹೊತ್ತಿ ಉರಿದ ದ್ವೇಷ
ಉಳಿದಿದೆ ಉಜ್ವಲ ಭವಿಷ್ಯ

✍️ ಅನಂದ ಕವಿ - Made using Quotes Creator App, Post Maker App
0 likes 0 comments
anandakavi
Quote by anandakavi - ಅನುಬಂಧ

ಅನುಸೂಯ ಮಲ್ಲಾಪನವರ ಮದುವೆಯ ಪಯಣ
ಹರುಷದಿ ನಡೆದಿದೆ ಅರವತ್ತನೆ ವಾರ್ಷಿಕ ಸಂಬ್ರಮ
ಮಕ್ಕಳು ಮೊಮ್ಮಕ್ಕಳ ಉಲ್ಲಾಸ ಉತ್ಸಾಹದ ಸಂಚಲನ

ಪವು ಚಟುಕು ಸೇರು ಅನ್ನುವ ಅವರ ಮಕ್ಕಳ ಯಾನ
ಸಂಸ್ಕಾರ ಸಂಸ್ಕೃತಿ ಸಂಸಾರದ ಸುಂದರ ಪ್ರಯಾಣ
ಓದು ಆರೋಗ್ಯ ವಿದ್ಯೆಗೆ ಆದ್ಯತೆಯೇ ಅವರ ಚಂದನವನ

ಬೆಂಗಳೂರಿನಲ್ಲಿ ವಿದ್ಯೆ ನೌಕರಿ ಸಂಸಾರ ನಿರ್ವಹಣೆ
ನಿವೃತ್ತ ಜೀವನ ಮದುವೆ ಸೊಸೆ ಅಳಿಯರ ಆಗಮನ
ಹರುಷ ಪ್ರೀತಿ ಸ್ನೇಹ ಬಾಂಧವ್ಯ ಅನನ್ಯತೆಯ ಸಮಾಗಮ

ಬಸವಣ್ಣನ  ವಚನಗಳ ಅನುಕರಣೆ ಅನುಭಾವ ಜೀವನ
ಸಿಹಿ ಕಹಿ ಏರಿಳಿತಗಳ ಅರ್ಥಪೂರ್ಣ ಮಿಶ್ರಣ ಸಮ್ಮಿಲನ
ಅರವತ್ತು ವಸಂತಗಳು ನಿರಂತರ ಪ್ರೀತಿಯೇ ಬಾಳಿನ ಕಂಕಣ

*ಬೇಕು ಬೇಡಗಳಿಗೆ ಜಾಗವಿಲ್ಲ ಪ್ರೀತಿಯ ಭಾವವೇ ನಮಗೆಲ್ಲಾ
ಬಂದು ಹೋಗುವ ಜೀವನ ಅರ್ಥಪೂರ್ಣ ನಿಮ್ಮ ಜೀವನ*


ಆನಂದ ಕವಿ  - Made using Quotes Creator App, Post Maker App
0 likes 0 comments
anandakavi
Quote by anandakavi - ಸೌರಭದ ಪಲ್ಲವಿ

ಮನೆಗೆ ಬರುವಳು ಮುದ್ದು ಸೊಸೆ
ಹರಿದಿಹುದು ಸಂಭ್ರಮದ ಹೊಳೆ
ಸುರಿದಿದೆ ಶುಭ ಹಾರೈಕೆಗಳ ಮಳೆ

ಹಸಿರು ಹಂದರ ತಳಿರು ತೋರಣ
ಹೂ ಮಾಲೆ ದೀಪಗಳ ಹೊರಾಂಗಣ
ಬರುವುದು ಹರುಷದ ಬೀಗರ ದಿಬ್ಬಣ

ಬಂಧು ಬಾಂಧವರಿಂದ ಮನೆಯು ತುಂಬಿದೆ
ಸಿಹಿ ರುಚಿ ತಿಂಡಿ ಮೃಷ್ಟಾನ್ನಗಳನು ಮಾಡಿದೆ
ಮಕ್ಕಳು ಮೊಮ್ಮಕ್ಕಳ ಉಲ್ಲಾಸ ಮನೆ ಮಾಡಿದೆ

ಹಾಡು ಕುಣಿತ ನಕ್ಕು ನಲಿಯುವ ಮೆರವಣಿಗೆ
ಸೌರಭದ ಸೊಬಗು ವೈಭೋಗದ ಛಾವಣಿಗೆ
ಪಲ್ಲವಿಯ ಸೌರಭವ ಸೂಸಿದೆ ಬೀಸಣಿಕೆ

ಶಿವ ಪಾರ್ವತಿಯ ಪ್ರತಿರೂಪವಾಗಿರಿ ನೀವು
ಸೊಸೆಯಾಗಿ ಬಂದು ಮಗಳಾಗಿರು ನೀನು
ನಮ್ಮ ಮನೆಯ ನಂದಾ ದೀಪ ಬೆಳಕಾಗು ನೀನು.

*ಪಲ್ಲವಿ ನಿನಗೆ ನಮ್ಮ ಮನೆ ಮನಗಳಿಗೆ ಹೃತ್ಪೂರ್ವಕ ಸ್ವಾಗತ*

ಹಂಜಿ ಪರಿವಾರ



ಆನಂದ ಕವಿ  - Made using Quotes Creator App, Post Maker App
1 likes 0 comments
anandakavi
Quote by anandakavi - ಕುಶಾಲ 

ಮುದ್ದು ಗಲ್ಲದ ಅರಸ ಚೆಲುವ ಚೆನ್ನಿಗರಾಯ 
ರುಚಿ ತಿನಿಸು ಬೇಡುವ ಚಪಲ ಚೆನ್ನಿಗರಾಯ
ನಿಷ್ಕಲ್ಮಶ ಮನಸಿನ ನಮ್ಮ ಮುದ್ದು ಕುಶಾಲರಾಯ

ಅಮ್ಮ ಅಕ್ಕನ ಜೀವನದ ಚಿನ್ನದ ನಂಟು
ಅವನಿಲ್ಲದ ಮನೆ ಶೂನ್ಯ ಮೌನದ ಗಂಟು
ನಕ್ಕು ನಲಿಸುವ ನಮ್ಮ ಹೆಮ್ಮೆಯ  ನಿಘಂಟು 

ಉತ್ಸಾಹದ ಚಿಲುಮೆ ಜ್ಞಾನದ ಸಂಚಲನೆ
ಹಾಡಿದರೆ ಮನ ಸೋಲುವುದು ಸುಮ್ಮನೆ
ಪುಟ್ಟ ಕಂಗಳಲ್ಲಿ ಅದೆಷ್ಟು ಅಡಗಿದೆಯೋ ಕಲ್ಪನೆ

ಅವನಿದ್ದೆಡೆ ಹರಿವುದು ಸಂತೋಷದ ಹೊಳೆ
ಅವನಿದ್ದೆಡೆ ಕುತೂಹಲ ಪ್ರಶ್ನೆಗಳ ಸುರಿಮಳೆ 
ಕೋಮಲ ಕುತೂಹಲ ಚಂಚಲ ಅಪರೂಪದ ಕಳೆ

ಅವನಿಗೆ ನಾವೋ ನಾವು ಅವನಿಗೋ ತಿಳಿದಿಲ್ಲ
ಆ ದೇವನು ಕಳುಹಿಸಿದ ಧೂತನೋ ಗೊತ್ತಿಲ್ಲಾ 
ಅಮ್ಮನ ಮುದ್ದು ಅಕ್ಕನ ಪ್ರೀತಿಯ ನಮ್ಮ ಕುಶಾಲ.



ಅನಂದಕವಿ


 - Made using Quotes Creator App, Post Maker App
0 likes 0 comments

Explore more quotes

anandakavi
Quote by anandakavi - ಜಡೆಗವನ

          *ನಮ್ಮವನೆಂದೆನಿಸೈಯ್ಯ*

ಇವನಾರವ ಇವನಾರವ ಇವನಾರವ ಎಂದೆನಿಸದಿರೈಯ್ಯ
ಎಂದೆನಿಸದಿರೈಯ್ಯ ನಮ್ಮ ಶಿವ ಶರಣರ ಅನುಭಾವವೈಯ್ಯ
ಅನುಭಾವ ಮಂಟಪದ ರಸದೌತಣ ಅವರ ಸಾನಿಧ್ಯವೈಯ್ಯ
ಸಾನಿಧ್ಯ ಅಲ್ಲಮ ಬಸವಣ್ಣ ಅಕ್ಕಮಹಾದೇವಿ ವಚನಗಳಯ್ಯ
ವಚನಗಳು ಜಾತಿ ಭೇದ ಪದ್ಧತಿ ಮೀರಿದ ಆಲೋಚನೆಯಯ್ಯ
ಆಲೋಚನೆ ಸನ್ಮಾರ್ಗ ಪರಿಪಾಲನೆ ಶರಣರ ಜೀವಳವೈಯ್ಯ 
ಜೀವಾಳ ಅವರ ಉತ್ತಮ ಪರಿಕಲ್ಪನೆ ಬಸವ ಕಲ್ಯಾಣವೈಯ್ಯ
ಕಲ್ಯಾಣ ರಾಜ್ಯದ ಶರಣರಿಗೆ ಕಾಯಕವೇ ಕೈಲಾಸ ವೈಯ್ಯ
ಕೈಲಾಸದ ಗೊಡ್ಡು ಸಂಪ್ರದಾಯ ಅರಿವು ಮೂಡಿಸಿದರೈಯ್ಯ
ಮೂಡಿಸಿ ಬಿತ್ತಿ ಅನುಭಾವದ ಸಹಸ್ರವಚನಗಳ ಬರೆದೆರೈಯ್ಯ
ಬರೆದು ತನು ಮನದಲಿ ತುಂಬಿ ಇವ ನಮ್ಮವ ಎಂದೆನಿಸೈಯ್ಯ
ಎಂದೆನಿಸೈಯ್ಯ ಇವನಾರವ ಇವನಾರವ ಇವನಾರವ ಎಂದೆನಿಸದೀರೈಯ್ಯ .

✍️ಆನಂದ - Made using Quotes Creator App, Post Maker App
0 likes 0 comments
anandakavi
Quote by anandakavi - *ರಕ್ತಪಾಥಾ*

ಸೂರ್ಯನ ಬೆಳಕು ಒಂದೇ ಭೂಮಿಯಲ್ಲಿ
ಹರಿವ ರಕ್ತವು ಒಂದೇ ದೇಹದಲ್ಲಿ
ಧರ್ಮದ ಹೆಸರಿನಲ್ಲಿ ರಕ್ತ ಪಾಥ 
ಯಾರು ಮೆಚ್ಚರು ಹುಚ್ಚಾ ಎನುವರಿಲ್ಲಿ.


ರೈತನ ಕೈಗಳಿಗೆ ಯಾವುದು ಧರ್ಮ
ದುಡಿವ ಜನರಿಗೆ ಉದ್ಯೋಗ ಕರ್ಮ
ಮತಿಯಿಲ್ಲದ ಮೂಢಂಗೆ ಬಂದೂಕೊಟ್ಟು
ದುರ್ಗತಿಗೆ ಕಾರಣ ಅನ್ನೋದೇ ಮರ್ಮ.


✍️ ಆನಂದ ಕವಿ - Made using Quotes Creator App, Post Maker App
0 likes 0 comments
anandakavi
Quote by anandakavi - *ಡಾ* *ಭೀಮರಾವ್ ಅಂಬೇಡ್ಕರ್*

ಶೋಷಿತ ವರ್ಗದ ಬೆಳಕು ನಂದಾದೀಪ 
ಮನುಕುಲದ ಧೀಮಂತ ವಿದ್ಯಾವಂತ ನಾಯಕ
ಗುಣವಂತ ಜ್ಞಾನದ ಮನವಿಯತೆ ಬೆಳಕು ಹಚ್ಚಿದಾತ 
ಹೆಮ್ಮೆಯ ಭಾರತದ ವಾಸ್ತುಶಿಲ್ಪಿ *ಭಾರತ ರತ್ನ*

ಬ್ರಿಟಿಷರ ಸೇನೆಯಲ್ಲಿ ಸೇವೆಗೈದ ಮನೆತನ
ಹದಿನಾಲ್ಕನೇ ಮಗುವಾಗಿ ಜನಸಿದ ಭೀಮ
ರಾಮಾಯಣ ಮಹಾಭಾರತ ಓದಲು ಉತ್ತೇಜನ
ಕಷ್ಟದಲ್ಲಿ ಛಲ ಬಿಡದ ದೃಢವಾಗಿ ನಿಂತ ತ್ರಿವಿಕ್ರಮ

ಉನ್ನತ ಶಿಕ್ಷಣಕೆ ಕೈ ಹಿಡಿದ ರಾಜ ಗಾಯಕವಾಡ
ವಿದೇಶದಿಂದ ಉತ್ಕೃಷ್ಟ ಶಿಕ್ಷಣ ಪದವಿಗಳ ಪಡೆದ 
ಜಾತಿ ನಿಂದನೆಗೆ ನೊಂದು ಒಗ್ಗೂಡಿಸಲು ನಿಂತ
ಜಾತಿ ಭೇದ ಅಸ್ಪೃಶ್ಯ ತೊರೆಯಲು ನಿರ್ಧರಿಸಿದ

ಭಾರತದ ವಾಸ್ತುಶಿಲ್ಪಿ ಮೊದಲ ಕಾನೂನು ಸಚಿವ
ಆಧುನಿಕ ಮನು ದಲಿತರ ಪ್ರತಿಪಾದಕ ಪಿತಾಮಹ
ನ್ಯಾಯ ಸಮಾನತೆ ಭ್ರಾತೃತ್ವ ತತ್ವಗಳ ಪ್ರತಿಷ್ಠಾಪಿಸಿದ
ಭೌದ್ಧ ಧರ್ಮ ಸ್ವೀಕರಿಸಿ ವಿಶ್ವಮಾನವನಾದ ಅನವರತ.

✍️ಆನಂದಕವಿ - Made using Quotes Creator App, Post Maker App
1 likes 0 comments
anandakavi
Quote by anandakavi - Accept all the happiness when showered, with open arms and full heart.you never know what chapter is written. Emotions are to make you not to break you.just believe have faith .Life Love It Live it.

Fuel Life 💕 



anandakavi - Made using Quotes Creator App, Post Maker App
3 likes 0 comments
anandakavi
Quote by anandakavi - *ಸಹನೆ*

ಭೂಮಿತಾಯಿ ನಿನಗೆ ಅದೇಷ್ಟು ಸಹನೆ
ಕಲಿತಳೇನು ಅಮ್ಮ ನಿನ್ನಿಂದಲೇ  ತಾಳ್ಮೆ 
ಸಹಿಸಿ ನೆಡೆವೆ ಕೊಂಕು ನುಡಿಗಳ ಸುಮ್ಮನೆ.
ಎಷ್ಟು ಬೆಲೆಗೆ ಕೊಂಡೆಯಮ್ಮ ಈ ಭಾವನೆ?

ತಂಪು ಕೊಟ್ಟ ಮರವೇ ಕಡಿವರು ನಿನಗೆ
ಮತ್ತೆ ಚಿಗಿತು ಹಣ್ಣು ಕೊಟ್ಟು ಕರೆವೆ ನಿನ್ನೆಡೆಗೆ
ಹಕ್ಕಿಗೆ ಗೂಡು ನೆರಳು, ಜೋಕಾಲಿ ಕಂದಮ್ಮಗೆ 
ಉಸಿರು ಹಸಿರು ಕೊಟ್ಟು ಸಹನೆ ಎಷ್ಟು ನಿನಗೆ.

ಭೂಮಿ ಬಗೆದು ಖನಿಜ ತೆಗೆದು ಬರಿದು ಮಾಡಿದೆ 
ರಸಾಯಾನಿಕಗಳ ಬಳಸಿ ಜೊಳ್ಳು ಮಣ್ಣು ಉಳಿದಿದೆ
ಕಾಡು ಕಡಿದು ನಾಡು ಮಾಡಿ ಭೂಮಿಗೆ ಭಾರವಾದೆ
ಸಹಿಸಿ ನಿನ್ನ ಎಲ್ಲಾ ನೋವ ಸಹನೆಯಿಂದ ಚಿಗುರಿದೆ.

ರಕ್ತ ಒಂದೇ ಮನುಜ ಒಂದೇ ದ್ವೇಷ ಏಕೆ ನಮ್ಮಲಿ
ಭೂಮಿ ಒಂದೇ ಧಾನ್ಯ ಒಂದೇ ಬೇಧ ಏಕೆ ಜಗದಲಿ
ಸೂರ್ಯನೊಬ್ಬ ಚಂದ್ರನೊಬ್ಬ ಬಿನ್ನ ಏಕೆ ಮತವಿಲ್ಲಿ 
ದೇವನೊಬ್ಬ ನಾಮ ಹಲವು ಸಹನೆ ಸೌಹಾರ್ದತೆ ಉಳಿಯಲಿ.

✍️ ಆನಂದ ಕವಿ - Made using Quotes Creator App, Post Maker App
1 likes 0 comments
anandakavi
Quote by anandakavi - ತ್ರಿಪದಿ 

*ಬ್ಯಾಸರಿಕಿ*

ಬಿಸಿಲಿಗೆ ಬ್ಯಾಸರಿಕಿ
ಬೆವರಾಗಿ ಬಸದೈತಿ//ಮಳೆರಾಯ
ಬಂದೊಮ್ಮೆ ತಣಿಸೋ ಭೂಮಿಯ 

✍️ಆನಂದಕವಿ - Made using Quotes Creator App, Post Maker App
2 likes 0 comments
anandakavi
Quote by anandakavi - ಐಸಿರಿ

ಐದು ದಳದ ಐಸಿರಿಯೇ 
ನೀನೆಷ್ಟು ಘಮಘಮಿಸುವೆ?
ಶ್ವೇತವು ನಿನ್ನ ವರ್ಣ
ನಡುವಿನಲಿ ಹೊಂಬಣ್ಣ
ಹಳದಿಯ ಚಂದನ
ದುಂಬಿಯ ಚುಂಬನವೋ
ಮಣ್ಣಿನ ಮಕರಂದವೋ
ಅರಳಿ ಮನವ ತಣಿಸುವೆ
ಮುಡಿಗೇರಿ ಕಂಗೊಳಿಸುವೆ
ಖಣದ ಕಂದು ಸೀರೆ ಉಟ್ಟು
ಕಂದು ಬಣ್ಣದ ಬಳೆಗಳ ತೊಟ್ಟು
ತೋರು ಬೆರಳಿನಲಿ ಉಂಗುರವಿಟ್ಠು 
ಹೂವಿನ ಮೇಲೆ ನಿನ್ನ ದಿಟ್ಟ ಕಣ್ಣ 
ಯಾವ ಮೋಹವು ನಿನ್ನ ಸೆಳೆದಿದೆ
ಯಾವ  ನೆನಪು ನಿನ್ನ ಕಾಡಿದೆ

ಆನಂದ ಕವಿ 


 - Made using Quotes Creator App, Post Maker App
2 likes 0 comments
anandakavi
Quote by anandakavi - ಸಣ್ಣ ಕಥೆ 
*ಕಾಂಪೌಂಡಿನ ಹೂವು*

ಇಲ್ಲೊಬ್ಬ ವೃದ್ಧ ಹಾಫ್ ಪ್ಯಾಂಟ್ ಷರ್ಟು ಹಾಕ್ಕೊಂಡು ಒಂದು ಪ್ಲಾಸ್ಟಿಕ್ ಚೀಲ ಕೈಲಿ ಹಿಡಿದುಕೊಂಡು ವಾಕಿಂಗ್ ಹೋಗೋ ಹಾದಿಯ ಎಲ್ಲ ಕಾಂಪೌಂಡಿನ ಹೂವು ಅವನ ಚೀಲದಲ್ಲಿ.ಎಷ್ಟೋ ಸಲ ಕಂಡಾಗ ಬೈದದ್ದು ಇದೆ.ಆದರೆ ಅದೇನೋ ಮೊಂಡುತನ ಅವನದು ಮತ್ತೆ ಅದೇ.. ಚಾಳಿ.ನಮ್ಮ ಪೂಜೆಗೂ ಹೂವು ಸಿಗೋಲ್ಲ ಅಂತ ಹೇಳಲು ಹೊರಟೆ ಹೆದರದೆ ಕಿತ್ತುತ್ತಾನೆ ಅಜ್ಜ, ಅಜ್ಜ ಏಕೆ ದಿನ ಇಂಥ ಕೆಲಸ?.ಮತ್ತು ಕಿತ್ತುಕೊಂಡು ಹೊರಟೆ ಬಿಟ್ಟ.ಹೋಗಲಿ ಬಿಡು ಅವನು ಪೂಜೆಗೆ ಒಯ್ಯುವ ಈ ಭೂಮಿಯು ಎಲ್ಲವನ್ನೂ ಕೊಟ್ಟರು ಯಾರು ಎಂದು ಕೇಳದ ನಾವು ಕಾಂಪೌಂಡ್ನಲ್ಲಿ ಬಿಟ್ಟ ಹೂವು ನಮ್ಮದು ಅಂತ ಕಾಯುತ್ತಾ ಕುಳಿತ ನಾವು ಒಡೆಯರೋ ? ಅಲ್ಲವಲ್ಲ ಅಂತ ನಕ್ಕು ಸುಮ್ಮನೆ ಕುಳಿತೆ.🌸🌺🌹🪻🌼🪷

✍️ ಆನಂದಕವಿ - Made using Quotes Creator App, Post Maker App
2 likes 0 comments
anandakavi
Quote by anandakavi - ತ್ರಿಪದಿ

ಹಚ್ಚಡ 

ಹಚ್ಚ ಹಸಿರಿನ ಕಾನನ
ಹಚ್ಚಡವ ಹೊದ್ದು ಮಲಗ್ಯನ//ಮಾದಪ್ಪ
ಹಸುವಿನ ಹಸಿವ ತಣಿಸ್ಯನ.


ಹಚ್ಚಡವ ಹೊದ್ದು ಬೆಚ್ಚಗೆ ಬಂದಾನ 
ಹುಚ್ಚೆದ್ದು ಹಾರಿ ಕುಣಿದಾನ //ಗೋರವಯ್ಯ
ಹೆಚ್ಚಾಗಲೀ ಒಡೆತನ ಅಂತ ಹರಿಸ್ಯನ.


ಆನಂದಕವಿ

 - Made using Quotes Creator App, Post Maker App
1 likes 0 comments
anandakavi
Quote by anandakavi - ಚಚ್ಚೌಕ ಕವನ

       *ಭಾಗೀರಥಿ*

ಮನೆಗೆ ಇವಳೇ ಸಾರಥಿ
ತುಂಬು ಕುಟುಂಬದ ಒಡತಿ
ಗಂಡನ ಪ್ರಿಯ ಪ್ರಾಣಸಖಿ 
ಚೆಲುವೆ ಈಕೆ ಭಾಗೀರಥಿ
ಚೈತನ್ಯದ ಸಹನಾ ಮೂರ್ತಿ
ಹರಡಿದೆ ಅವಳ ಕೀರ್ತಿ
ಛಲಗಾರ್ತಿ ಈ ಧೈರ್ಯವಂತೆ
ನಡೆ ನುಡಿಗಳೇ ಸಂಸ್ಕೃತಿ
ನೀವು ನಮ್ಮ ಬಾಳಿಗೆ ಸ್ಪೂರ್ತಿ.

✍️ ಆನಂದಕವಿ - Made using Quotes Creator App, Post Maker App
1 likes 0 comments

Explore more quotes

anandakavi
Quote by anandakavi - Smile and laughter make your world bigger and happier. Cry may be loud but squeeze your heart and soul . Be the one to spread happiness. Connect the world with joy rather than cry. Life Love it Live it.

Fuel Life 💕 

 - Made using Quotes Creator App, Post Maker App
2 likes 0 comments
anandakavi
Quote by anandakavi - ಮಾನಿನಿ 

ಹೃದಯ ಕದ್ದ ಮಾನಿನೀ 
ಮೃದು ಭಾಷಿಣಿ ಸುಹಾಸಿನಿ
ಸಹಭಾಗಿ ಸುಂದರ ಸಂಗಿನಿ 
ಕರುಳಿನ ಕುಡಿ ಹೊತ್ತ ಜನನಿ

ಚಂದನ ವನದ ಗಜಗಾಮಿನಿ
ಚೆಲುವಿನ ಒಲವಿನ ಅರಗಿಣಿ 
ನವಿಲ ನಡುಗೆ ಉದ್ದ ವೇಣಿ 
ಮನದ ಅರಸಿ ಚಿನ್ನದ ಗಣಿ 

ಕರುಣೆ ಸ್ನೇಹವೆ ಅವಳ ಶೃಂಗಾರ
ನಿಸ್ವಾರ್ಥ ಸೇವೆಯೇ ಅವಳ ಸಂಸ್ಕಾರ 
ಅರಿತು ನೆಡೆವಳು ಮನದ ಆಗರ
ಗರತಿ ನನ್ನ ಮಡದಿ ಹೊಂಗೆಯ ಮರ

ಕಣ್ಣಲ್ಲೇ ಬಯಕೆ ಅರಿವ ಕಾಮಿನಿ
ಜೀವ ನದಿಯ ಹರಿವ ಪ್ರವಾಹಿನಿ
ಆನಂದದ ತಂಗಾಳಿ ನನ್ನ ರಮಣೀ
ಅವಳ ಪ್ರೀತಿಗೆ ನಾನು ಸದಾ ಚಿರಋಣಿ


ಆನಂದ ಕವಿ


 - Made using Quotes Creator App, Post Maker App
0 likes 0 comments
anandakavi
Quote by anandakavi - ಮಕ್ಕಳ ಕವನ
  ರಜಾದ ಮಜಾ

ಅಮ್ಮ ಶಾಲೆಗೆ ಇನ್ನು ರಜಾ 
ಮಾಡುವೆವು ಮನೆಯಲ್ಲಿ ಮಜಾ
ಅಮ್ಮ ಅಪ್ಪನಿಗೆ ಬಿಡುವಿಲ್ಲದ ಕೆಲಸ 
ಅಜ್ಜಿಯ ಮನೆಗೆ ಹೋಗೋಣಪ್ಪ
ಅಜ್ಜನ ಜಾತ್ರೆಲಿ ಆಟಿಕೆ ತರೋಣಪ್ಪ
ಮಾಮಿ ಮಾಡುವಳು ರುಚಿ ರುಚಿ ತಿಂಡಿ
ಮಾಮ ಸಿನಿಮಾ ಪಾರ್ಕಿಗೆ ಕರೆದೊಯ್ಯುವ
ಅಜ್ಜಿ ರಾತ್ರಿ ಹೇಳುವಳು ಹೊಸ ಕಥೆ
ಅಜ್ಜ ಚಕೊಲೇಟ್ ಬಿಸ್ಕತ್ ಕೇಕ್ ತರುವರು
ಅಬ್ಬಾ ರಜವೆಂದರೆ ಎಷ್ಟು ಮಜವಮ್ಮ
ಓದಿಲ್ಲ ಬರೆಯುವುದಿಲ್ಲ ಅಲ್ವೆನಪ್ಪ
ಬೆಳಗ್ಗೆ ಅಜ್ಜನ ಜೊತೆಗೆ ವ್ಯಾಯಮ
ಸಂಜೆ ಅಜ್ಜಿಯ ಶ್ಲೋಕ ಗಾಯನ
ಬಿಡುವಿನ ವೇಳೆ ಗೆಳೆಯರ ಸಮಾಗಮ.
ಜೊತೆಯಲಿ ಊಟ ನಕ್ಕು ನಗಿಸುವ ಅಮ್ಮ
ಬೇಸಿಗೆಯ ಬಿಸಿಲಿನ ಧಗೆಯಲ್ಲೂ ಸಂಭ್ರಮ
ರಜದ ದಿನಗಳು ಮಜವೋ ಮಾಜವಮ್ಮ.

✍️ಆನಂದ ಕವಿ  - Made using Quotes Creator App, Post Maker App
0 likes 0 comments
anandakavi
Quote by anandakavi - some people work beyond your imagination.some flow like water in the river.both are journey, one bring contentment and other just a journey. Life Love It Live it.
Fuel Life 💕

anandakavi  - Made using Quotes Creator App, Post Maker App
0 likes 0 comments
anandakavi
Quote by anandakavi - Thinking to change the things or changing yourself for the change for the betterment of life. Be the one to bring the change. Be an inspiration for the new sustainable world.neq beginning beyond our solar Life Love It Live it.

Fuel Life 💕 



 anandakavi  - Made using Quotes Creator App, Post Maker App
1 likes 0 comments
anandakavi
Quote by anandakavi - Some people work beyond our imagination 
Some just flow like a river in the water.both being journey one is for contentment other is just a life.making our life is in own hands.life love it live it.

Fuel Life 💕 



anandakavi  - Made using Quotes Creator App, Post Maker App
3 likes 0 comments
anandakavi
Quote by anandakavi - ಜ್ಯೋತಿ


ಪ್ರೇಮಮಯಿ ಈ ನಲ್ಮೆಯ ಗೆಳತಿ
ತಾನಾಯ್ತು ತನ್ನ ಮನೆ ಅವಳ ನೀತಿ
ನಿಯಮಿತ ಮಾತು ಹನಸ್ಮ್ಮುಖಿ  ಸಖಿ
ಜ್ಞಾನ ಸ್ನೇಹ ಹೃದಯವೇ ಇವಳಿಗೆ ಸ್ಪೂರ್ತಿ 

ಶಾಂತಿನಾಥಗೆ ಪ್ರೀತಿಯ ಜೀವನ ಸಂಗಾತಿ 
ಮಕ್ಕಳಿಗೆ ಮುದ್ದಿನ ಅಮ್ಮ ಬಾಳಿನ ಜ್ಯೋತಿ
ಯೋಗ ಧ್ಯಾನ ವಾಚನ ಮೇಲೆ ಬಲು ಪ್ರೀತಿ
ನಮ್ಮೆಲ್ಲರಿಗೂ ಅಚ್ಚು ಮೆಚ್ಚಿನ ಪ್ರೀತಿಯ ಗೆಳತಿ

ಸಾತ್ವಿಕತೆ ಸಹಜತೆಯೇ ಅವಳಿಗೆ ಆಭರಣ
ಶುದ್ಧ ಭಾವೈಕ್ಯತೆ ಸುಂದರ ಬದುಕಿಗೆ ಕಾರಣ
ಪ್ರೀತಿಯೇ ಜೀವನ ,ಬಯಕೆಗಳಿಗೆ ಕಡಿವಾಣ
ಹಂಸದ ನಡಿಗೆ ಮಧುರ ಇವಳ ಚಲನ ವಲನ 

ಸುಖಮಯ ಆರೋಗ್ಯ ಸಮೃದ್ಧವಾಗಲಿ ಜೀವನ
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಜ್ಯೋತಿ

ಆನಂದ ಕವಿ



 - Made using Quotes Creator App, Post Maker App
0 likes 0 comments
anandakavi
Quote by anandakavi - *ಮದುವೆ*

ರೈತರ ಮನೆಯ ಸುಶಿಕ್ಷಿತ ಮನೆಯ ಒಡತಿ
ಮದುವೆಯ ವಯಸ್ಸು ಈಗ ಇವಳ ಸರತಿ
ಅಮ್ಮನ ರೇಷ್ಮೆ ರವಿಕೆ ಸರಿ ಮಾಡಲು ಕುಳತಿ 
ಸೂಜಿ ದಾರ ಕೈಯಲ್ಲಿ,ಏನು ಚಿಂತೆ ಮಾಡತಿ 

ಮನದಲ್ಲಿ ನೂರು ಭಾವಗಳ ಸುರಿಮಳೆ
ನಕ್ಲೆಸ್ ಕೊರಳಲಿ ಕೈಯಲ್ಲಿ ಬಂಗಾರದ ಬಳೆ
ಪುಟ್ಟ ಬೊಟ್ಟು ಸಂಪಿಗೆ ಬಣ್ಣ ಹವಳದ ತುಟಿಗಳು 
ಉಲ್ಲಾಸದ ಮನ ಆದರೂ ಆತಂಕದ ಕಳೆ 

ಉನ್ನತ ಶಿಕ್ಷಣ ಪಡೆದು ಹುದ್ದೆಲ್ಲಿ ಇರುವಳು
ಪುಟ್ಟ ಕಂಗಳಲ್ಲಿ ಕಂಡ ತನ್ನ ಆಸೆ ನಿರೀಕ್ಷೆಗಳೂ 
ಹೇಳಿಕೊಳ್ಳಲೇ  ಬೇಡವೇ ಅನ್ನೋ ತವಕಗಳು 
ಮಾತನಾಡಿ ನೋಡುವ ದೃಢ ನಿರ್ಧಾರ ಮಾಡಿದಳು

ಅಚ್ಚುಕಟ್ಟಾಗಿ ಲಕ್ಷಣವಾಗಿ ಸಿಂಗಾರ ಗೊಂಡಳು
ತಿಂಡಿ ಕಾಫಿ ಆಮೇಲೆ ಏಕಾಂತದಲ್ಲಿ ಮಾತುಗಳು
ಹೆಣ್ಣು ಗಂಡು ಸಂತಸದಿ ಒಪ್ಪಿಗೆ ಸೂಚಿಸಿದರು
ಸಮಾನ ಖರ್ಚು ವೆಚ್ಚ ಮಾಡಿ ಮದುವೆ ಮಾಡಿದರು.

✍️ ಆನಂದ ಕವಿ - Made using Quotes Creator App, Post Maker App
0 likes 0 comments
anandakavi
Quote by anandakavi - ವಿಶ್ವ ಮಹಿಳಾ ದಿನ 

ವಿಶ್ವ ಮಹಿಳಾ ದಿನ ಸಂಭ್ರಮವೂ ಸಂಭ್ರಮ 
ಚೆಂದದ ಉಡಿಗೆ ಉಟ್ಟು ಸಂತಸ ಪಡವ ದಿನ
ಎಲ್ಲರೂ ಕೂಡಿ ವಿಶೇಷ ಸನ್ಮಾನ ರಸದ ಔತಣ
ಎಂದೂ ಅರಿವಾಗದ ಹೆಣ್ಣು ಅನ್ನೋ ಸುದಿನ 

ಬೆನ್ನೆಲುಬಾಗಿ ನಿಲ್ಲುವಳು ಜೊತೆಯಲ್ಲಿ ಸದಾ ಇವಳು
ಬಿಟ್ಟಿ ಬೇಸರಿಕೆಯಿಂದಲೇ ಇವಳನ್ನ ನೋಡುವರು
ಇವಳ ಚಲನ ವಲನ ಸದಾ ಗಮನಿಸುತ್ತಿರುವರು
ಹುಟ್ಟಿದ ಕೊಟ್ಟ ಮನೆಗೆ ಕಾಮಧೇನು ಕಲ್ಪವೃಕ್ಷ ಇವಳು

ಪ್ರೀತಿ ಬೆರೆಸಿದ ಅಡುಗೆ ರುಚಿ ಇವಳ ಕೈಯಲ್ಲಿ
ಅಪ್ಪ ಅಣ್ಣ ತಮ್ಮ ಗಂಡ ಮಗನಿಗೆ ಪ್ರೀತಿಯ ಹೊಳೆ
ತನ್ನ ಮರೆತು ದೇವರಲ್ಲಿ ಇವರಿಗೆ ವರ ಬೇಡುವಳು
ಮಗಳು ಅಕ್ಕ ತಂಗಿ ಗೆಳತಿ ಸಖಿಯಾಗಿ ಇರುವಳು

ಇಂದಿನ ಮಹಿಳೆ ಯಾವುದಕ್ಕೂ ಅಂಜದ ಹೆಣ್ಣು 
ಎಲ್ಲಾ ಕ್ಷೇತ್ರದಲ್ಲೂ ಸಾಧಿಸಿ ಸಮನಾಗಿ ನಿಂತಿಹಳು
ಉಜ್ವಲ ಸಮೃದ್ಧ ದೇಶದ ಭವಿಷ್ಯ ಇಂದಿನ ನಾರಿ
ಸಂಸ್ಕೃತಿ ,ಆಧುನಿಕತೆಯ ಇಂದಿನ ಹೆಣ್ಣು ಮಾದರಿ.

ಆನಂದಕವಿ

 - Made using Quotes Creator App, Post Maker App
0 likes 0 comments
anandakavi
Quote by anandakavi - life travels between necessary and unnecessary things we collect and carry through out our life.some remain useless,some least , some make happy.some are burden.
sometimes leaving giving sharing make you richer and wiser.Life Love it Live it.
Fuel Life 💕 
 - Made using Quotes Creator App, Post Maker App
1 likes 0 comments

Explore more quotes